ADVERTISEMENT

ಹೊತ್ತಿಉರಿದ ಪೆಟ್ರೋಲ್‌ ಟ್ಯಾಂಕರ್‌: ವ್ಯಕ್ತಿ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 10:47 IST
Last Updated 19 ಜೂನ್ 2018, 10:47 IST
ಹೊತ್ತಿಉರಿದ ಪೆಟ್ರೋಲ್‌ ಟ್ಯಾಂಕರ್‌: ವ್ಯಕ್ತಿ ಸಜೀವ ದಹನ
ಹೊತ್ತಿಉರಿದ ಪೆಟ್ರೋಲ್‌ ಟ್ಯಾಂಕರ್‌: ವ್ಯಕ್ತಿ ಸಜೀವ ದಹನ   

ಕಡೂರು(ಚಿಕ್ಕಮಗಳೂರು): ಪೆಟ್ರೋಲ್‌ ಟ್ಯಾಂಕರ್‌ವೊಂದು ಇಲ್ಲಿನ ಗಿರಿಯಾಪುರದ ನಡುರಸ್ತೆಯಲ್ಲಿ ಹೊತ್ತಿಉರಿದು ವ್ಯಕ್ತಿಯೊಬ್ಬರು ಸಜೀವವಾಗಿ ದಹನವಾಗಿರುವ ಘಟನೆ ನಡೆದಿದೆ.  

ಕಡೂರಿನಿಂದ ಹೊಸದುರ್ಗದ ಕಡೆಗೆ ಟ್ಯಾಂಕರ್‌ ತೆರಳುತ್ತಿತ್ತು. 

ಟ್ಯಾಂಕರ್‌ ದಹನದಿಂದಾಗಿ ಪ್ರದೇಶದ 100 ಮೀ. ವ್ಯಾಪ್ತಿಯಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ಆವರಿಸಿತ್ತು. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. 

ADVERTISEMENT

ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಐದು ಮನೆಗಳಿಗೂ ತಗಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.