ADVERTISEMENT

₨ 2.30 ಲಕ್ಷ ನಗದು ವಶ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಹುಬ್ಬಳ್ಳಿ: ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₨2.30 ಲಕ್ಷ ನಗದನ್ನು ತಾಲ್ಲೂ­ಕಿನ ಅಗಡಿ ಚೆಕ್‌­ಪೋಸ್ಟ್‌ ಬಳಿ ಗ್ರಾಮೀಣ ಠಾಣೆ ಪೊಲೀಸರು ಶನಿ­ವಾರ ವಶಪಡಿಸಿ­ಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಶಿರಸಿಯ ಸೋಮಾಪುರ ಗುಡ್ಡ  ನಿವಾಸಿ ಕೃಷ್ಣ ಕೊರವರ ಹಾಗೂ ಮಂಜು­ನಾಥ ಪಿಳ್ಳೈ ಬಂಧಿತರು, ಬೆಳಿಗ್ಗೆ 9 ಸುಮಾರಿಗೆ ಅಧಿಕಾರಿಗಳು ವಾಹನ ತಪಾ­ಸಣೆಯಲ್ಲಿ ತೊಡಗಿದ್ದ ಸಂದರ್ಭ ಕಾರಿನಲ್ಲಿ ಹಣ ಪತ್ತೆಯಾಗಿದೆ.

‘ಗ್ರಾನೈಟ್‌ ಕಲ್ಲು ತರಲು ಶಿರಸಿ­ಯಿಂದ ಇಳಕಲ್‌ಗೆ ಹಣವನ್ನು ಒಯ್ಯು­ತ್ತಿ­ದ್ದು­ದಾಗಿ ಬಂಧಿತರಿಬ್ಬರು ತಿಳಿಸಿ­ದ್ದಾರೆ. ಅವರು ಸಮರ್ಪಕ ದಾಖಲೆ­ಗಳನ್ನು ಒದಗಿಸದ ಕಾರಣ ಹಣವನ್ನು ವಶ­ಪಡಿಸಿ­ಕೊಳ್ಳಲಾಗಿದೆ’ ಎಂದು ಎಸ್‌ಎಸ್‌ಟಿ ಮ್ಯಾಜಿಸ್ಟ್ರೇಟ್ ಬಸವ­ರಾಜ ಕುಸುಗಲ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.