ADVERTISEMENT

ಅಥಣಿ, ಗೋಕಾಕದಲ್ಲಿ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 19:41 IST
Last Updated 11 ಜುಲೈ 2019, 19:41 IST

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಗಡಿ ಭಾಗದ ಹಳ್ಳಿಗಳಲ್ಲಿ ಹಾಗೂ ಗೋಕಾಕ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಮುಂಗಾರು ಪೂರ್ವ ಮಳೆ ಬಾರದಿದ್ದರಿಂದ ಹಾಗೂ ಮಹಾರಾಷ್ಟ್ರ ಸರ್ಕಾರ, ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ ನೀರು ಹರಿಸದಿದ್ದರಿಂದ ಅಥಣಿ ತಾಲ್ಲೂಕಿನ ಬಾಡಿಗಿ, ಐಗಳಿ, ತೆಲಸಂಗ, ಕಕಮರಿ ಗ್ರಾಮಗಳಲ್ಲಿ 3–4 ತಿಂಗಳಿನಿಂದ ನೀರಿನ ಕೊರತೆ ಕಂಡುಬಂದಿದೆ.

ಗ್ರಾಮಗಳಲ್ಲಿ ಕೊರೆಸಲಾಗಿದ್ದ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಗ್ರಾಮಸ್ಥರೇ ಹಣ ಹಾಕಿ, ಟ್ಯಾಂಕರ್‌ ನೀರು ತರಿಸಿಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಜನರೊಂದಿಗೆ ಸ್ಪಂದಿಸಲು ಇಲ್ಲಿನ ಶಾಸಕ ಮಹೇಶ ಕುಮಠಳ್ಳಿ ಇಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಕಾರ್ಯಕರ್ತರು ಸಜ್ಜಾಗುತ್ತಿದ್ದಾರೆ.

ಗೋಕಾಕದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಸಮೀಪವೇ ಘಟಪ್ರಭಾ ನದಿ ಹರಿದಿದ್ದರೂ ನೀರಿನ ಸಮಸ್ಯೆ ತಪ್ಪಿಲ್ಲ. 24x7 ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಸಮರ್ಪಕ ಅನುಷ್ಠಾನವಾಗಿಲ್ಲ. ವಾರ್ಡ್‌ 17, 29ರಲ್ಲಿ ಈಗಲೂ ಸಮಸ್ಯೆ ಇದೆ. ಸ್ಥಳೀಯರೇ ಹಣ ನೀಡಿ, ಟ್ಯಾಂಕರ್‌ ನೀರು ಪಡೆದುಕೊಳ್ಳುತ್ತಿದ್ದಾರೆ. ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಅಂದಹಾಗೇ ಇಲ್ಲಿನ ಶಾಸಕರು ರಮೇಶ ಜಾರಕಿಹೊಳಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.