ADVERTISEMENT

12 ಐಪಿಎಸ್‌ ಅಧಿಕಾರಿಗಳ ವರ್ಗ

ವಜೀರ್‌ ಅಹ್ಮದ್‌ ಸ್ಥಾನಕ್ಕೆ ಸುರೇಶ ಕುನ್ಹಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಬೆಂಗಳೂರು: ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಸಾವಿನ ಪ್ರಕರ­ಣಕ್ಕೆ ಸಂಬಂಧಿಸಿ­ದಂತೆ ವಿವಾದಕ್ಕೆ ಒಳಗಾಗಿದ್ದ ಗುಲ್ಬ­ರ್ಗದ ಈಶಾನ್ಯ ವಲಯ ಐಜಿಪಿ ಮೊಹಮದ್‌ ವಜೀರ್‌ ಅಹ್ಮದ್‌ ಸೇರಿದಂತೆ 12  ಐಪಿಎಸ್‌ ಅಧಿಕಾರಿ­ಗ­ಳನ್ನು ವರ್ಗಾ­ವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ರೌಡಿ ಮುನ್ನಾನ ಗುಂಡೇಟಿಗೆ ಪಿಎಸ್‌ಐ ಬಂಡೆ ಸತ್ತಾಗಲೇ ವಜೀರ್‌ ಅವರ ವರ್ಗಾವಣೆಗೆ ಸರ್ಕಾರ ತೀರ್ಮಾ­ನಿಸಿತ್ತು. ಬಳಿಕ ಅದನ್ನು ಕೈಬಿಟ್ಟಿತ್ತು. ಈಗ ಪುನಃ ಅವರನ್ನು ವರ್ಗಾವಣೆ ಮಾಡಿ ಪೊಲೀಸ್‌ ತರಬೇತಿ ವಿಭಾಗದ ಐಜಿಪಿ ಹುದ್ದೆಗೆ ನಿಯೋಜಿಸಿದೆ.

ವರ್ಗಾವಣೆಯಾದ ಇತರ ಅಧಿಕಾರಿಗಳು:
* ಅಮರ್‌ ಕುಮಾರ್‌ ಪಾಂಡೆ– ಎಡಿಜಿಪಿ, ಆಂತರಿಕ ಭದ್ರತೆ.

* ಟಿ.ಸುನೀಲ್‌ ಕುಮಾರ್‌– ಎಡಿಜಿಪಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ.

* ಸಿ.ಎಚ್‌.ಪ್ರತಾಪ್‌ ರೆಡ್ಡಿ– ಐಜಿಪಿ ಮತ್ತು ಕಾರ್ಯದರ್ಶಿ, ಗೃಹ ಇಲಾಖೆ.

* ಡಾ.ಸುರೇಶ ಕುನ್ಹಿ ಮೊಹಮದ್‌– ಐಜಿಪಿ, ಈಶಾನ್ಯ ವಲಯ, ಗುಲ್ಬರ್ಗ.

* ಕೆ.ಎಸ್‌.ಆರ್‌.ಚರಣ್‌ ರೆಡ್ಡಿ– ಐಜಿಪಿ, ವಿಶೇಷ ತನಿಖಾ ತಂಡ, ಲೋಕಾಯುಕ್ತ. ಅವರಿಗೆ ಜಲಸಂಪನ್ಮೂಲ ಇಲಾಖೆ ಜಾಗೃತ ವಿಭಾಗದ ಹೆಚ್ಚುವರಿ ಹೊಣೆ.

* ನಕ್ಸಲ್‌ ವಿರೋಧಿ ಕಾರ್ಯಪಡೆ ಕಮಾಂಡರ್‌ ಸೀಮಂತ್‌ ಕುಮಾರ್‌ ಸಿಂಗ್‌ ಅವರಿಗೆ ಹೆಚ್ಚುವರಿಯಾಗಿ ಪಶ್ಚಿಮ ವಲಯದ ಐಜಿಪಿ ಹುದ್ದೆ ನೀಡಲಾಗಿದೆ.

* ಡಾ.ರಾಮ್‌ ನಿವಾಸ್‌ ಸೆಪಟ್‌– ಎಸ್ಪಿ ವಿಜಾಪುರ.

* ಅಜಯ್‌ ಹಿಲೋರಿ– ಎಸ್ಪಿ, ಕೋಲಾರ. ಇವರಿಗೆ ಕೆಜಿಎಫ್‌ ಎಸ್ಪಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

* ಡಾ.ರೋಹಿಣಿ ಕಟೊಚ್‌ ಸೆಪಟ್‌– ಎಸ್ಪಿ, ಕೊಪ್ಪಳ.

* ಎಸ್‌.ಡಿ. ಶರಣಪ್ಪ– ಎಸ್ಪಿ, ದಕ್ಷಿಣ ಕನ್ನಡ.

* ಕೆ.ಟಿ.ಬಾಲಕೃಷ್ಣ– ಎಸ್ಪಿ, ಗದಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.