ಬೆಂಗಳೂರು: ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಒಳಗಾಗಿದ್ದ ಗುಲ್ಬರ್ಗದ ಈಶಾನ್ಯ ವಲಯ ಐಜಿಪಿ ಮೊಹಮದ್ ವಜೀರ್ ಅಹ್ಮದ್ ಸೇರಿದಂತೆ 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ರೌಡಿ ಮುನ್ನಾನ ಗುಂಡೇಟಿಗೆ ಪಿಎಸ್ಐ ಬಂಡೆ ಸತ್ತಾಗಲೇ ವಜೀರ್ ಅವರ ವರ್ಗಾವಣೆಗೆ ಸರ್ಕಾರ ತೀರ್ಮಾನಿಸಿತ್ತು. ಬಳಿಕ ಅದನ್ನು ಕೈಬಿಟ್ಟಿತ್ತು. ಈಗ ಪುನಃ ಅವರನ್ನು ವರ್ಗಾವಣೆ ಮಾಡಿ ಪೊಲೀಸ್ ತರಬೇತಿ ವಿಭಾಗದ ಐಜಿಪಿ ಹುದ್ದೆಗೆ ನಿಯೋಜಿಸಿದೆ.
ವರ್ಗಾವಣೆಯಾದ ಇತರ ಅಧಿಕಾರಿಗಳು:
* ಅಮರ್ ಕುಮಾರ್ ಪಾಂಡೆ– ಎಡಿಜಿಪಿ, ಆಂತರಿಕ ಭದ್ರತೆ.
* ಟಿ.ಸುನೀಲ್ ಕುಮಾರ್– ಎಡಿಜಿಪಿ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ.
* ಸಿ.ಎಚ್.ಪ್ರತಾಪ್ ರೆಡ್ಡಿ– ಐಜಿಪಿ ಮತ್ತು ಕಾರ್ಯದರ್ಶಿ, ಗೃಹ ಇಲಾಖೆ.
* ಡಾ.ಸುರೇಶ ಕುನ್ಹಿ ಮೊಹಮದ್– ಐಜಿಪಿ, ಈಶಾನ್ಯ ವಲಯ, ಗುಲ್ಬರ್ಗ.
* ಕೆ.ಎಸ್.ಆರ್.ಚರಣ್ ರೆಡ್ಡಿ– ಐಜಿಪಿ, ವಿಶೇಷ ತನಿಖಾ ತಂಡ, ಲೋಕಾಯುಕ್ತ. ಅವರಿಗೆ ಜಲಸಂಪನ್ಮೂಲ ಇಲಾಖೆ ಜಾಗೃತ ವಿಭಾಗದ ಹೆಚ್ಚುವರಿ ಹೊಣೆ.
* ನಕ್ಸಲ್ ವಿರೋಧಿ ಕಾರ್ಯಪಡೆ ಕಮಾಂಡರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಹೆಚ್ಚುವರಿಯಾಗಿ ಪಶ್ಚಿಮ ವಲಯದ ಐಜಿಪಿ ಹುದ್ದೆ ನೀಡಲಾಗಿದೆ.
* ಡಾ.ರಾಮ್ ನಿವಾಸ್ ಸೆಪಟ್– ಎಸ್ಪಿ ವಿಜಾಪುರ.
* ಅಜಯ್ ಹಿಲೋರಿ– ಎಸ್ಪಿ, ಕೋಲಾರ. ಇವರಿಗೆ ಕೆಜಿಎಫ್ ಎಸ್ಪಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.
* ಡಾ.ರೋಹಿಣಿ ಕಟೊಚ್ ಸೆಪಟ್– ಎಸ್ಪಿ, ಕೊಪ್ಪಳ.
* ಎಸ್.ಡಿ. ಶರಣಪ್ಪ– ಎಸ್ಪಿ, ದಕ್ಷಿಣ ಕನ್ನಡ.
* ಕೆ.ಟಿ.ಬಾಲಕೃಷ್ಣ– ಎಸ್ಪಿ, ಗದಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.