ADVERTISEMENT

19 ಸೇತುವೆ‌ ಅಪಾಯಕಾರಿ: ದುರಸ್ತಿಗೆ ಗುರುತಿಸಿದ ಕೇಂದ್ರ ಭೂಸಾರಿಗೆ ಸಚಿವಾಲಯ!

ದುರಸ್ತಿಗೆ ಗುರುತಿಸಿದ ಕೇಂದ್ರ ಭೂಸಾರಿಗೆ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 2:29 IST
Last Updated 19 ಫೆಬ್ರುವರಿ 2023, 2:29 IST
   

ನವದೆಹಲಿ: ಕರ್ನಾಟಕದಲ್ಲಿ ದುರಸ್ತಿ ಹಾಗೂ ಪುನರ್‌ ನಿರ್ಮಾಣಕ್ಕೆ ಕಾದಿರುವ 19 ಸೇತುವೆಗಳನ್ನು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯ ಗುರುತಿಸಿದೆ.

ಹಳೆಯ ಸೇತುವೆಗಳ ಪಟ್ಟಿಯಲ್ಲಿ ಬೆಂಗಳೂರು–ನೆಲಮಂಗಲ ನಡುವಿನ ಪೀಣ್ಯ ಮೇಲ್ಸೇತುವೆಯೂ ಸೇರಿದೆ. ದುರಸ್ತಿಗೆ ಕಾದಿರುವ ಹಳೆಯ ಸೇತುವೆ ಗಳ ಪಟ್ಟಿಯಲ್ಲಿ ಕರಾವಳಿ ಹಾಗೂ ಮಲೆನಾಡಿನ 10 ಸೇತುವೆಗಳು ಇವೆ. ಕೆಲ ವೊಂದು ಸೇತುವೆಗಳು ತೀರಾ ಹಳೆಯದಾ ಗಿದ್ದು, ಅವುಗಳ ಮರು ನಿರ್ಮಾಣ ಮಾಡಬೇಕಿದೆ. ಕೆಲವೊಂದು ಸೇತುವೆ ಗಳ ತುರ್ತಾಗಿ ದುರಸ್ತಿ ಮಾಡಬೇಕಿದೆ ಎಂದೂ ಸಚಿವಾಲಯ ಹೇಳಿದೆ.

ರಾಷ್ಟ್ರೀಯ ಹೆದ್ದಾರಿ ಹಾಗೂ ಸೇತುವೆ ಗಳ ದುರಸ್ತಿ ಮತ್ತು ನಿರ್ವಹಣೆ ನಿರಂತರ ಪ್ರಕ್ರಿಯೆ. ಪ್ರತಿವರ್ಷ ಇದಕ್ಕೆ ಅನುದಾನ ಮೀಸಲಿಡಲಾಗುತ್ತದೆ ಎಂದೂ ಸಚಿವಾಲ ಯದ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.