ಬೆಂಗಳೂರು: ವರ್ಬಾಟಲ್ ಫೌಂಡೇಷನ್ ವತಿಯಿಂದ ಶಾಲಾ ಮಕ್ಕಳಿಗಾಗಿ ಕನ್ನಡ ಚರ್ಚಾ ಸ್ಪರ್ಧೆಯನ್ನು ಇದೇ 21ರಿಂದ 31ರವರೆಗೆ ಆಯೋಜಿಸಲಾಗಿದೆ.
ಜ. 21 ಹಾಗೂ 22ರಂದು ಹುಬ್ಬಳ್ಳಿಯಲ್ಲಿ, 24ರಿಂದ 31ರ ವರೆಗೆ ಬೆಂಗಳೂರಿನಲ್ಲಿ ಈ ಸ್ಪರ್ಧೆ ನಡೆಯಲಿದೆ. ಸ್ಪರ್ಧಾಪೂರ್ವ ಆಯ್ಕೆಯಲ್ಲಿ 2,000 ವಿದ್ಯಾರ್ಥಿಗಳು ಹಾಗೂ ನೇರ ಸ್ಪರ್ಧೆಯಲ್ಲಿ 600 ವಿದ್ಯಾರ್ಥಿಗಳು ಭಾಗವಹಿಸುವರು. 12ರಿಂದ 16 ವರ್ಷದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಒಂದು ತಂಡದಲ್ಲಿ ಇಬ್ಬರು ಸ್ಪರ್ಧಿಗಳು ಇರಬಹುದು.
ಪ್ರತಿ ಚರ್ಚೆಗೆ ಮೂರು ತಂಡಗಳು ಪಾಲ್ಗೊಳ್ಳಲಿವೆ. ಮೊದಲನೇ ಬಹುಮಾನ ರೂ. 30,000. ಅಂತಿಮ ಸುತ್ತು ತಲುಪಿದ ಎರಡು ತಂಡಗಳಿಗೆ ತಲಾ ರೂ. 5,000, ಮೊದಲನೇ ಬಹುಮಾನ ಪಡೆದ ತಂಡದ ಶಿಕ್ಷಕರಿಗೆ ರೂ. 5,000 ಬಹುಮಾನ ನೀಡಲಾಗುವುದು. ಪ್ರತಿ ತಂಡಕ್ಕೆ ಪ್ರವೇಶ ಶುಲ್ಕ ರೂ. 200. ಭಾಗವಹಿಸುವ ಪ್ರತಿ ಸರ್ಕಾರಿ ಶಾಲೆಯಿಂದ ಒಂದು ತಂಡಕ್ಕೆ ಪ್ರವೇಶ ಶುಲ್ಕ ವಿನಾಯಿತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ: 080–4251 1111 ಸಂಪರ್ಕಿಸಬಹುದು. ಇ ಮೇಲ್ verbattle@gmail.com ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.