ADVERTISEMENT

ಈಜಲು ಹೋಗಿ ಮೂವರು ನೀರುಪಾಲು

ಆಲೂರು: ಹುಣಸವಳ್ಳಿ ಸಮೀಪ ಯಗಚಿ ನದಿಯಲ್ಲಿ ಮುಳುಗಿ ಸಾವು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 13:54 IST
Last Updated 8 ಅಕ್ಟೋಬರ್ 2019, 13:54 IST

ಆಲೂರು: ಹುಣಸುವಳ್ಳಿ ಗ್ರಾಮದ ಸಮೀಪ ಹಾದು ಹೋಗಿರುವ ಯಗಚಿ ನದಿಯಲ್ಲಿ ಮಂಗಳವಾರ ಈಜಾಲು ಹೋಗಿದ್ದ ಐವರು ಯುವಕರಲ್ಲಿ ಮೂವರು ನೀರುಪಾಲಾಗಿದ್ದಾರೆ.

ಹುಣಸವಳ್ಳಿ ಗ್ರಾಮದ ನಿವಾಸಿ ರತನ್ (21), ದೊಡ್ಡ ಕಣಗಾಲು ಗ್ರಾಮದ ಭೀಮಣ್ಣ(24) ಮನು (22) ಮೃತಪಟ್ಟವರು.

ಹುಣಸವಳ್ಳಿಯ ಸಂಜಯ್ (22) ದೊಡ್ಡ ಕಣಗಾಲ್ ಗ್ರಾಮದ ನಿವಾಸಿ ಧನು (20) ಅಸ್ವಸ್ಥಗೊಂಡಿದ್ದು ಆಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ADVERTISEMENT

ಸ್ಥಳಕ್ಕೆ ಜಿಲ್ಲಾಧಿಕಾರಿ ಗಿರೀಶ್ ಹಾಗೂ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.