ತುಮಕೂರು: ಮಧುಗಿರಿ ತಾಲ್ಲೂಕು ಕಾಟಗಾನಹಟ್ಟಿ ಸಮೀಪ ಬುಧವಾರ ಸಂಜೆ ಲಾರಿ ಮತ್ತು ಮಾರುತಿ ಕಾರು ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಕಾರಿನಲ್ಲಿದ್ದ ಬೆಂಗಳೂರಿನ ಮುರುಳಿ, ಮಂಜುನಾಥ್, ರಾಮಮೋಹನ್, ಶಿವಪ್ರಸಾದ್ ಮತ್ತು ದಿನೇಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ 22ರಿಂದ 24 ವರ್ಷದ ಒಳಗಿನವರು.
ಮೃತರೆಲ್ಲ ಸ್ನೇಹಿತರಾಗಿದ್ದು ಪಾವಗಡ ತಾಲ್ಲೂಕಿನ ಕುಂದುಪ್ರಿ ಗ್ರಾಮದಲ್ಲಿ ಬುಧವಾರ ಸಂಜೆ ಇದ್ದ ಗೆಳೆಯನ ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದರು. ಲಾರಿ ತುಮಕೂರು ಕಡೆಗೆ ಬರುತ್ತಿತ್ತು. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.