ADVERTISEMENT

ಕೆಜೆಪಿಯಲ್ಲಿದ್ದಾಗ 'ಜೈ ಟಿಪ್ಪು'; ಬಿಜೆಪಿಗೆ ಮರಳಿದಾಗ 'ಜೈ ಶ್ರೀರಾಮ್'; ಮುಂದೆ ಯಾರಿಗೆ ಜೈ?: ಸಿದ್ದರಾಮಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 16:30 IST
Last Updated 7 ಜನವರಿ 2018, 16:30 IST
ಕೆಜೆಪಿಯಲ್ಲಿದ್ದಾಗ 'ಜೈ ಟಿಪ್ಪು'; ಬಿಜೆಪಿಗೆ ಮರಳಿದಾಗ 'ಜೈ ಶ್ರೀರಾಮ್'; ಮುಂದೆ ಯಾರಿಗೆ ಜೈ?: ಸಿದ್ದರಾಮಯ್ಯ ಟೀಕೆ
ಕೆಜೆಪಿಯಲ್ಲಿದ್ದಾಗ 'ಜೈ ಟಿಪ್ಪು'; ಬಿಜೆಪಿಗೆ ಮರಳಿದಾಗ 'ಜೈ ಶ್ರೀರಾಮ್'; ಮುಂದೆ ಯಾರಿಗೆ ಜೈ?: ಸಿದ್ದರಾಮಯ್ಯ ಟೀಕೆ   

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಕೆಸರೆರಚಾಟ ಹಾಗೂ ವಾಗ್ದಾಳಿ ನಡೆಯುತ್ತಲೇ ಇದೆ.

ಮುಂದಿನ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿರಿಸಿಕೊಂಡಿರುವ ಪಕ್ಷಗಳು ಪರಸ್ಪರ ಟೀಕೆ, ಹೀಯಾಳಿಸುವುದಲ್ಲಿ ಮಗ್ನವಾಗಿವೆ.

ಅವರಿಗಿಂತ ನಾನೇನು ಕಮ್ಮಿ; ಇವರಿಗಿಂತ ಅವರೇನು ಕಮ್ಮಿ ಎಂದು ಒಬ್ಬರ ಮೇಲೊಬ್ಬರು ಮುಗಿಬಿದ್ದು, ವಾಗ್ದಾಳಿ ನಡೆಸಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಟೀಕೆ ಮಾಡಿದ್ದಾರೆ.

ADVERTISEMENT

‘ಬಿಜೆಪಿ ಬಿಎಸ್‌ವೈ
ಕೆಜೆಪಿಯಲ್ಲಿದ್ದಾಗ 'ಜೈ ಟಿಪ್ಪು'
ಬಿಜೆಪಿಗೆ ಮರಳಿದಾಗ 'ಜೈ ಶ್ರೀರಾಮ್'
ಮುಂದೆ ಯಾರಿಗೆ ಜೈ?’
ಎಂದು ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.