ADVERTISEMENT

ಗಾಯಾಳು ಬಾಲಕನಿಗೆ ಶಿವರಾಜ್‌ಕುಮಾರ್ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
ಗಾಯಾಳು ಬಾಲಕನಿಗೆ ಶಿವರಾಜ್‌ಕುಮಾರ್ ಸಾಂತ್ವನ
ಗಾಯಾಳು ಬಾಲಕನಿಗೆ ಶಿವರಾಜ್‌ಕುಮಾರ್ ಸಾಂತ್ವನ   

ಮೈಸೂರು: ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡಿರುವ ಬಾಲಕ ಉಲ್ಲೇಖ್‌ಗೆ ನಟ ಶಿವರಾಜ್‌ಕುಮಾರ್ ಇಲ್ಲಿ ಶನಿವಾರ ಸಾಂತ್ವನ ಹೇಳಿದರು.

‘ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಆಗ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆಘಾತಕ್ಕೆ ಒಳಗಾದಾಗ ಧೈರ್ಯಗೆಡಬಾರದು. ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಆಗ ಯಶಸ್ಸು ಸಿಗುತ್ತದೆ’ ಎಂದು ಧೈರ್ಯ ತುಂಬಿದರು.

ಸದ್ವಿದ್ಯಾ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಉಲ್ಲೇಖ್ ಕಳೆದ ಅಕ್ಟೋಬರ್‌ನಲ್ಲಿ ಬಸ್‌ ಹತ್ತುವಾಗ ಬಿದ್ದು ಕಾಲು ಕಳೆದುಕೊಂಡಿದ್ದ. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡುವ ಆಸೆ ವ್ಯಕ್ತಪಡಿಸಿದ್ದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.