ADVERTISEMENT

ಮಠ ವಶಕ್ಕೆ ಪಡೆದರೆ ಹಿಂದೂ ವಿರೋಧಿ ಕ್ರಮವಾಗಲಿದೆ: ಪೇಜಾವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST
ಮಠ ವಶಕ್ಕೆ ಪಡೆದರೆ ಹಿಂದೂ ವಿರೋಧಿ ಕ್ರಮವಾಗಲಿದೆ: ಪೇಜಾವರ ಸ್ವಾಮೀಜಿ
ಮಠ ವಶಕ್ಕೆ ಪಡೆದರೆ ಹಿಂದೂ ವಿರೋಧಿ ಕ್ರಮವಾಗಲಿದೆ: ಪೇಜಾವರ ಸ್ವಾಮೀಜಿ   

ಉಡುಪಿ: ‘ಸರ್ಕಾರ ಮಠಗಳನ್ನು ಸ್ವಾಧೀನಕ್ಕೆ ಪಡೆಯಲಿದೆ ಎಂಬ ಸುದ್ದಿಯನ್ನು ಕೆಲ ಮಾಧ್ಯಮಗಳು ಪ್ರಸಾರ ಮಾಡಿವೆ. ಇದು ನಿಜವೇ ಆದರೆ ಹಿಂದೂ ವಿರೋಧಿ ನೀತಿಯಾಗುತ್ತದೆ, ಸರ್ಕಾರವೇ ಪ್ರತಿ ಪಕ್ಷಗಳಿಗೆ ಹೋರಾಟ ಮಾಡಲು ಪ್ರಬಲ ಅಸ್ತ್ರ ನೀಡಿದಂತಾಗುತ್ತದೆ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜಾತ್ಯತೀತ ಸರ್ಕಾರ ಎಲ್ಲರನ್ನು ಸಮಾನಾಗಿ ನೋಡಬೇಕು. ಮುಗ್ದ ಅಲ್ಪಸಂಖ್ಯಾತರ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯಿರಿ ಎಂದು ಸುತ್ತೋಲೆ ಹೊರಡಿಸಲಾಗಿತ್ತು. ಸರ್ಕಾರ ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ. ಒಂದು ವೇಳೆ ನಮ್ಮ ಮಠವನ್ನು ವಶಕ್ಕೆ ಪಡೆದರೆ ನಾನಂತೂ ಮಠವನ್ನೂ ಬಿಟ್ಟು ಹೊರ ಬಂದು ಸಮಾಜವನ್ನು ಆಶ್ರಯಿಸಿ ಬದುಕುತ್ತೇನೆ. ಸರ್ಕಾರದ ನೌಕರನಾಗಿ ಇರುವುದಿಲ್ಲ. ಹೋರಾಟವನ್ನೂ ಮಾಡುವುದಿಲ್ಲ. ಈ ವಿಷಯದ ಬಗ್ಗೆಯೇ ಜನರೇ ತೀರ್ಮಾನ ಮಾಡುವರು’ ಎಂದರು.

ಈ ಸುದ್ದಿಯನ್ನು ನೀವು ಖಚಿತಪಡಿಸಿಕೊಂಡಿದ್ದೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೆಲವು ಸುದ್ದಿ ವಾಹಿನಿಗಳಲ್ಲಿ ಬಂದಿದೆ, ಅದು ನಿಜವೋ ಸುಳ್ಳೋ ನಿಜವೋ ಗೊತ್ತಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.