ADVERTISEMENT

ಪಕ್ಷ ಪ್ರಚಾರಕ್ಕೆ ಕರ್ನಾಟಕ ಭೂಪಟ ವಿರೂಪ ಅಕ್ಷಮ್ಯ: ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಗರಂ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 11:44 IST
Last Updated 10 ಫೆಬ್ರುವರಿ 2018, 11:44 IST
ಪಕ್ಷ ಪ್ರಚಾರಕ್ಕೆ ಕರ್ನಾಟಕ ಭೂಪಟ ವಿರೂಪ ಅಕ್ಷಮ್ಯ: ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಗರಂ
ಪಕ್ಷ ಪ್ರಚಾರಕ್ಕೆ ಕರ್ನಾಟಕ ಭೂಪಟ ವಿರೂಪ ಅಕ್ಷಮ್ಯ: ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ಗರಂ   

ಬೆಂಗಳೂರು: ಕಾಂಗ್ರೆಸ್ ಬಿಡುಗಡೆ ಮಾಡಿರುವ ‘#ನನ್ನಕರ್ನಾಟಕ’‌ದಲ್ಲಿ ರಾಜ್ಯದ ಭೂಪಟವನ್ನು ವಿರೂಪಗೊಳಿಸಲಾಗಿದೆ. ಇದು ಅಕ್ಷಮ್ಯ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದಾರೆ.

‘ಪಕ್ಷದ ಪ್ರಚಾರಕ್ಕಾಗಿ ರಾಜ್ಯದ ಭೂಪಟವನ್ನೇ ವಿರೂಪಗೊಳಿಸಲಾಗಿದೆ. ಸಿದ್ದರಾಮಯ್ಯನವರೆ ನಿಮಗೆ ಕರ್ನಾಟಕ, ಭೂಪಟ, ಧ್ವಜ ಚುನಾವಣಾ ಪ್ರಚಾರದ ವಸ್ತು ಇರಬಹುದು. ನನಗೆ, ನಾಡಿಗೆ ಇದರ ಬಗ್ಗೆ ಅತೀವ ಭಕ್ತಿ, ಗೌರವವಿದೆ. ಭಾರತದ ಭೂಪಟ ವಿರೂಪಗೊಳಿಸಿದಷ್ಟೇ ಅಕ್ಷಮ್ಯ, ರಾಜ್ಯದ ಭೂಪಟ ವಿರೂಪಗೊಳಿಸುವುದು. ಚುನಾವಣಾ ಪ್ರಚಾರ ಮಾಡಿ, ಸ್ವಾಭಿಮಾನವನ್ನು ಅಡವಿಟ್ಟಲ್ಲ’ ಎಂದು ಯಡಿಯೂರಪ್ಪ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT