ADVERTISEMENT

ಸೌಹಾರ್ದದಿಂದ ಬಗೆಹರಿದ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 19:30 IST
Last Updated 10 ಫೆಬ್ರುವರಿ 2018, 19:30 IST
ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿನ ಅಯ್ಯನಕೆರೆಯಲ್ಲಿ ನೀರಿನ ಮಟ್ಟ ಪರಿಶೀಲಿಸಿದ ಅಧಿಕಾರಿಗಳು
ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿನ ಅಯ್ಯನಕೆರೆಯಲ್ಲಿ ನೀರಿನ ಮಟ್ಟ ಪರಿಶೀಲಿಸಿದ ಅಧಿಕಾರಿಗಳು   

ಕಡೂರು: ಅಯ್ಯನಕೆರೆ ನೀರನ್ನು ಬಿಡುವ ವಿಚಾರವಾಗಿ ಶುಕ್ರವಾರ ಉದ್ಬವವಾಗಿದ್ದ ಸಮಸ್ಯೆ ಶನಿವಾರ ಸೌರ್ಹಾದಯುತವಾಗಿ ಅಂತ್ಯ ಕಂಡಿತು.

ಶನಿವಾರ ಸಖರಾಯಪಟ್ಟಣದ ಪೊಲೀಸ್‍ ಠಾಣೆಯಲ್ಲಿ ನಡೆದ ಸಭೆಯಲ್ಲಿ ಸಖರಾಯಪಟ್ಟಣ ಮತ್ತು ಬ್ರಹ್ಮ ಸಮುದ್ರ ಕೆರೆ ಬಳಕೆದಾರರು ಮತ್ತು ಬಿಸಲೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ತರೀಕೆರೆ ಉಪವಿಭಾಗಾಧಿಕಾರಿ ಬಿ.ಬಿ.ಸರೋಜ ಮಾತನಾಡಿ, ‘ಪ್ರಸ್ತುತ ಅಯ್ಯನಕೆರೆಯಲ್ಲಿ ಕೇವಲ ನಾಲ್ಕೂವರೆ ಅಡಿ ನೀರು ಇದ್ದು, ಅದರಲ್ಲಿ ಅರ್ಧ ಅಡಿ ಹೂಳು ಇದೆ. ಉಳಿದ ನಾಲ್ಕು ಅಡಿಗಳಲ್ಲಿ ಎರಡು ಅಡಿ ನೀರನ್ನು ಹೊರಬಿಟ್ಟು ಎರಡೂ ಕಡೆಯವರಿಗೆ ಸಮನಾಗಿ ನೀರು ಸಿಗಬೇಕು’ ಎಂದು ಅವರು ಹೇಳಿದರು.

ADVERTISEMENT

ಸಖರಾಯಪಟ್ಟಣದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ನಿಷೇಧಾಜ್ಞೆ ತೆರವುಗೊಳಿಸುವುದಾಗಿ ಡಿವೈಎಸ್‌ಪಿ ತಿರುಮಲೇಶ್ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.