ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದ್ದು 24 ಗಂಟೆಗಳ ಅವಧಿಯಲ್ಲಿ 4,867 ಪ್ರಕರಣಗಳು ದೃಢಪಟ್ಟಿದ್ದು8,404 ಜನರು ಗುಣಮುಖರಾಗಿದ್ದಾರೆ
ರಾಜ್ಯದಲ್ಲಿ ಈವರೆಗೆ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ34 ಸಾವಿರದ ಗಡಿ ದಾಟಿದೆ. ಸೋಮವಾರ142 ಮಂದಿ ಸಾವಿಗೀಡಾಗಿರುವ ಕಾರಣ ಒಟ್ಟು ಸಂಖ್ಯೆ34,025ಕ್ಕೆ ಹೆಚ್ಚಿದೆ. ಮರಣ ಪ್ರಮಾಣ ದರ ಶೇ2.91ಕ್ಕೆ ತಲುಪಿದೆ.
ಕೊರೊನಾ ಸೋಂಕಿತರ ಸಂಖ್ಯೆಯಲ್ಲೂ ಅಲ್ಪ ಏರಿಕೆ ಕಂಡಿದೆ. ಹೊಸದಾಗಿ 4,867 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಕೋವಿಡ್ ಪೀಡಿತರ ಒಟ್ಟು ಸಂಖ್ಯೆ28.11 ಲಕ್ಷಕ್ಕೆ ಏರಿಕೆಯಾಗಿದೆ.
ಹಿಂದಿನ24 ಗಂಟೆಗಳಲ್ಲಿ1.49 ಲಕ್ಷ ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು,ಸೋಂಕು ದೃಢ ಪ್ರಮಾಣ ಶೇ 3.25ಕ್ಕೆ ತಲುಪಿದೆ.
ಕೋವಿಡ್ ಪೀಡಿತರ ಪೈಕಿ 8,404 ಮಂದಿಯಲ್ಲಿ ಕಾಯಿಲೆ ವಾಸಿಯಾಗಿದೆ. ಇದರಿಂದಾಗಿ ಗುಣಮುಖರ ಸಂಖ್ಯೆ26.54 ಲಕ್ಷಕ್ಕೆ ಹೆಚ್ಚಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ1.23 ಲಕ್ಷಕ್ಕೆ ಇಳಿದಿದೆ.
ಬೆಂಗಳೂರು (28) ಮತ್ತು ಮೈಸೂರಿನಲ್ಲಿ (22) ಸೋಮವಾರ ಅಧಿಕ ಮಂದಿ ಅಸುನೀಗಿದ್ದಾರೆ. ಬಳ್ಳಾರಿ (12) ಹಾಗೂ ದಕ್ಷಿಣ ಕನ್ನಡ (14) ಜಿಲ್ಲೆಗಳಲ್ಲಿ ಹತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. 22 ಜಿಲ್ಲೆಗಳಲ್ಲಿ ಇದು ಒಂದಂಕಿಗೆ ಇಳಿದಿದೆ.
ಬೆಂಗಳೂರಿನಲ್ಲಿ ಹೊಸದಾಗಿ1,034 ಮಂದಿಗೆ ಸೋಂಕು ತಗುಲಿದೆ. ಮೈಸೂರಿನಲ್ಲಿ (546) ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.11 ಜಿಲ್ಲೆಗಳಲ್ಲಿ200ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.