ADVERTISEMENT

ಎಸಿಬಿಯ 17 ಡಿವೈಎಸ್‌ಪಿಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 5:28 IST
Last Updated 20 ಡಿಸೆಂಬರ್ 2022, 5:28 IST
   

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್‌ಪಿಗಳನ್ನು ಕರ್ನಾಟಕ ಲೋಕಾಯುಕ್ತ ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ಸೋಮವಾರ ವರ್ಗಾವಣೆ ಮಾಡಲಾಗಿದೆ.

ಎ.ಆರ್.ಭರತ್‌ರೆಡ್ಡಿ, ಬಿ.ಉಮಾ ಶಂಕರ್‌, ಮಂಜುನಾಥ್‌ಕೆ. ಗಂಗಲ್‌, ಎಂ.ಎಸ್‌.ಸುರೇಶ್ ರೆಡ್ಡಿ, ವಿಜಯ್‌ ಬಿರಾದಾರ್‌, ಸಿ.ಎಸ್‌.ಮಲ್ಲಿಕಾರ್ಜುನ್, ಹನುಮಂತರಾಯ್‌ ಶ್ರೀಮಂತ ರಾಯ, ಕೆ.ಟಿ.ಮ್ಯಾಥ್ಯೂ ಥಾಮಸ್‌, ಉಮೇಶ್‌ ಈಶ್ವರ್‌ ನಾಯಕ್‌, ಕೆ.ಸಿ.ಪ್ರಕಾಶ್‌, ಎಚ್‌.ಟಿ.ಸುನಿಲ್‌ ಕುಮಾರ್‌, ವಿ.ಸೂರ್ಯನಾರಾಯಣ್‌ ರಾವ್, ಬಿ.ಗಿರೀಶ್‌, ಎಸ್‌.ಸುಧೀರ್‌ ಹಾಗೂ ಪಿ. ವಿರೇಂದ್ರ ಕುಮಾರ್‌ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಮಲ್ಲೇಶ್‌ ದೊಡ್ಡಮನಿ ಅವರನ್ನು ಡಿಸಿಆರ್‌ಬಿಯಿಂದ ದಾವಣಗೆರೆ ನಗರ ಉಪ ವಿಭಾಗ ಹಾಗೂ ಬಿ.ಎಸ್‌.ಅಬ್ದುಲ್‌ ಖಾದರ್‌ ಅವರನ್ನು ಪ್ರೇಜರ್ ಟೌನ್‌ನಿಂದ (ಪುಲಿಕೇಶಿ ನಗರ) ಬೆಂಗಳೂರು ನಗರದ ಸಂಚಾರ ಮತ್ತು ರಸ್ತೆ ಸುರಕ್ಷತಾ ಕೋಶಕ್ಕೆ ವರ್ಗಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT