ADVERTISEMENT

ಕಲಬುರ್ಗಿಯಲ್ಲಿ ಭೀಕರ ಅಪಘಾತ: ಇಬ್ಬರು ಮಕ್ಕಳು ಸೇರಿ ಐವರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 3:38 IST
Last Updated 27 ಆಗಸ್ಟ್ 2019, 3:38 IST
   

ಕಲಬುರ್ಗಿ:ಆಳಂದ ರಸ್ತೆಯ ಸಾವಳಗಿ ಕ್ರಾಸ್ ಹತ್ತಿರ ಇಂದು ಮುಂಜಾನೆ ಸ್ಕಾರ್ಪಿಯೊ ಮತ್ತು ಲಾರಿ‌ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಪಟ್ಟವರು ಮಹಾರಾಷ್ಟ್ರದ ದಕ್ಷಿಣ ಸೊಲ್ಲಾಪುರ ತಾಲ್ಲೂಕಿನ ಚಿಂಚಪೂರದವರು. ತಿರುಪತಿಗೆ ಹೋಗಿ ಮರಳುತ್ತಿದ್ದ ವೇಳೆಯಲ್ಲಿ ಅಪಘಾತ ಸಂಭವಿಸಿದೆ.

ಸಂಜಯ್ ಕುಮಾರ್ (29) , ರಾಣಿ ಸಂಜಯ್ (26) ಭಾಗ್ಯಶ್ರೀ (22) , ಶ್ರೇಯಸ್ (3) ಧೀರಜ್ ಸಂಗಣ್ಣ (2) ಸ್ಥಳದಲ್ಲೇ ಸಾವಿಗೀಡಾದರು.

ADVERTISEMENT

ಶಿವರಾಜ್, ಶೀತಲ್ ಸಂಗಣ್ಣ, ಭೀಮಾಶಂಕರ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.