ಬೆಂಗಳೂರು: ರಾಜ್ಯದಲ್ಲಿ ನಡೆಯುವ ಉಪಚುನಾವಣೆಗಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಒಂಭತ್ತು ಮಂದಿ ವೀಕ್ಷಕರನ್ನು ನೇಮಿಸಿದೆ.
ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಿಗೆ ಎಸ್.ಎ.ಸಂಪತ್ ಕುಮಾರ್, ಗೋಕಾಕ್, ಯಲ್ಲಾಪುರಗಳಿಗೆ ವಂಶಿಚಂದ ರೆಡ್ಡಿ, ಹಿರೇಕೆರೂರು, ರಾಣೆಬೆನ್ನೂರ್ಗೆ ಪೊನ್ನಂ ಪ್ರಭಾಕರ್, ಚಿಕ್ಕಬಳ್ಳಾಪುರ, ಹೊಸಕೋಟೆಗಳಿಗೆ ಎಂ.ಎಂ.ಪಲ್ಲಂ ರಾಜು, ಕೆ.ಆರ್.ಪುರ, ಶಿವಾಜಿನಗರಗಳಿಗೆ ಮಯೂರ ಜಯಕುಮಾರ್, ಕೆ.ಆರ್.ಪೇಟೆ, ಹುಣಸೂರುಗಳಿಗೆ ವಿಶ್ವನಾಥನ್, ಮಹಾಲಕ್ಷ್ಮಿ ಲೇಔಟ್, ಯಶವಂತಪುರಗಳಿಗೆ ಸಂಜೀವ್ ಜೋಸೆಫ್, ವಿಜಯನಗರಕ್ಕೆ ಎನ್.ತುಳಸಿ ರೆಡ್ಡಿ ಹಾಗೂ ಸಂಚಾಲಕರಾಗಿ ಜೆ.ಡಿ.ಸಲೀಂ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನೇಮಕ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.