ADVERTISEMENT

ಬೆಂಗಳೂರಲ್ಲಿ ಗಗನಸಖಿ ಸಾವು ಪ್ರಕರಣ: ಕಾಸರಗೋಡು ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 11:04 IST
Last Updated 14 ಮಾರ್ಚ್ 2023, 11:04 IST
ಅರ್ಚನಾ ಧಿಮಾನ್
ಅರ್ಚನಾ ಧಿಮಾನ್   

ಕಾಸರಗೋಡು: ಬೆಂಗಳೂರಿನಲ್ಲಿ ಗಗನಸಖಿಯೊಬ್ಬರನ್ನು ಕಟ್ಟಡದ ಮೇಲಿಂದ ತಳ್ಳಿ ಕೊಲೆ ಮಾಡಿದ ಆರೋಪದ ಮೇರೆಗೆ ಇಲ್ಲಿಯ ಆದರ್ಶ (26) ಎಂಬಾತನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಒಂದರ ಬಾಲ್ಕನಿಯಿಂದ ಹಿಮಾಚಲ ಪ್ರದೇಶದವರಾದ ಗಗನಸಖಿ ಅರ್ಚನಾ ಧಿಮಾನ್ (28) ಅವರನ್ನು ಕೆಳಕ್ಕೆ ತಳ್ಳಿ ಕೊಲೆ ಮಾಡಿರುವ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ. ಬೆಂಗಳೂರು– ದುಬೈ ಮಾರ್ಗದ ವಿಮಾನದಲ್ಲಿ ಅರ್ಚನಾ ಗಗನಸಖಿಯಾಗಿದ್ದರು. ಅರ್ಚನಾ ಅವರ ತಾಯಿ ನೀಡರುವ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿರುವ ಪೊಲೀಸರು ಆದರ್ಶನನ್ನು ಮಂಗಳವಾರ ಬಂಧಿಸಿದ್ದಾರೆ ಎಂದು ಕಾಸರಗೋಡು ಪೊಲೀಸ್‌ ಮೂಲಗಳು ತಿಳಿಸಿವೆ.

ಶನಿವಾರ ನಸುಕಿನಲ್ಲಿ ಆದರ್ಶ ವಾಸಿಸುವ ಕೋರಮಂಗಲದ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಅರ್ಚನಾ ಅವರು ಕೆಳಕ್ಕೆ ಬಿದ್ದು ಮೃತಪಟ್ಟಿದ್ದರು. ಆದರ್ಶ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ ಉದ್ಯೋಗಿ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.