ADVERTISEMENT

ಅಕಾಡೆಮಿಗಳಿಂದ ನೆರವಿಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 15:58 IST
Last Updated 22 ಏಪ್ರಿಲ್ 2020, 15:58 IST
   

ಬೆಂಗಳೂರು: ಸಂಕಷ್ಟದಲ್ಲಿರುವ ಕಲಾವಿದರು ಹಾಗೂ ಸಾಹಿತಿಗಳಿಂದ ಸಾಂಸ್ಕೃತಿಕ ಅಕಾಡೆಮಿಗಳು ಆರ್ಥಿಕ ನೆರವಿಗೆ ಅರ್ಜಿಗಳನ್ನು ಆಹ್ವಾನಿಸಿವೆ.

10 ವರ್ಷ ತಮ್ಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ, ಸರ್ಕಾರಿ ನೌಕರಿಯಲ್ಲಿ ಇರದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯದವರು ನೆರವು ಪಡೆಯಲು ಅರ್ಹರಾಗಿರುತ್ತಾರೆ. ಕಲಾ ಪ್ರಕಾರ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್‌ ಖಾತೆ ಸಂಖ್ಯೆಯ ವಿವರಗಳನ್ನು ಒಳಗೊಂಡ ಸ್ವವಿವರದ ಅರ್ಜಿಗಳನ್ನು ಏ.27ರೊಳಗೆ ಇ ಮೇಲ್ ವಿಳಾಸ ಅಥವಾ ವಾಟ್ಸ್‌ ಆ್ಯಪ್ ಸಂಖ್ಯೆಗೆ ಕಳುಹಿಸುವಂತೆ ಅಕಾಡೆಮಿಗಳು ಪ್ರಕಟಣೆಯಲ್ಲಿ ತಿಳಿಸಿವೆ.

ಇ ಮೇಲ್ ವಿಳಾಸಗಳು:ಕರ್ನಾಟಕ ಲಲಿತ ಕಲಾ ಅಕಾಡೆಮಿ kla.karnataka@gmail.com,ಕರ್ನಾಟಕ ಸಾಹಿತ್ಯ ಅಕಾಡೆಮಿ sahithya.academy@gmail.com (ವಾಟ್ಸ್‌ ಆ್ಯಪ್‌ ನಂ. 9449738908),ಕರ್ನಾಟಕ ಶಿಲ್ಪಕಲಾ ಅಕಾಡೆಮಿ shilpakala.academy@gmail.com,ಕರ್ನಾಟಕ ನಾಟಕ ಅಕಾಡೆಮಿ academy.nataka@gmail.com (ವಾಟ್ಸ್‌ ಆ್ಯಪ್‌ ನಂ. 7975949840).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.