ADVERTISEMENT

ಬಿಜೆಪಿ ಜಿಲ್ಲಾ ಘಟಕಗಳಿಗೆ ಪ್ರಭಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 19:21 IST
Last Updated 16 ಸೆಪ್ಟೆಂಬರ್ 2020, 19:21 IST

ಬೆಂಗಳೂರು: ಬಿಜೆಪಿ ರಾಜ್ಯ ಘಟಕ ವಿವಿಧ ಜಿಲ್ಲೆಗಳಿಗೆ ಪಕ್ಷದ ಪ್ರಭಾರಿಗಳು ಮತ್ತು ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕರನ್ನು ನೇಮಿಸಿದೆ.

ಮಾಜಿ ಸಚಿವರಾದ ಎ.ಮಂಜು ಅವರಿಗೆ ಮಂಡ್ಯ, ಡಿ.ಎನ್‌.ಜೀವರಾಜ್ ಅವರನ್ನು ಶಿವಮೊಗ್ಗಕ್ಕೆ ಪ್ರಭಾರಿಯನ್ನಾಗಿ ನೇಮಿಸಲಾಗಿದೆ.

ಶಾಸಕರಾದ ಅಭಯ ಪಾಟೀಲ– ಬಾಗಲಕೋಟೆ, ಉಮಾನಾಥ ಕೋಟ್ಯಾನ್–ಉಡುಪಿ, ಸಂಸದರಾದ ಭಗವಂತ ಖೂಬಾ– ಯಾದಗಿರಿ, ಪ್ರತಾಪ ಸಿಂಹ– ತುಮಕೂರು, ಪಿ.ಸಿ.ಮೋಹನ್– ಬೆಂಗಳೂರು ಗ್ರಾಮಾಂತರ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್– ಬೀದರ್ ಜಿಲ್ಲೆಗೆ ಪ್ರಭಾರಿಯಾಗಿ ನೇಮಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.