ADVERTISEMENT

‘ಮಂಡ್ಯ ಭವನ’ ನಿರ್ಮಾಣಕ್ಕೆ ನೆರವು: ಸಚಿವ ನಾರಾಯಣಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 19:45 IST
Last Updated 9 ಜೂನ್ 2022, 19:45 IST
ಬೆಂಗಳೂರಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಮಂಡ್ಯ ಜಿಲ್ಲಾ ಅನಿವಾಸಿಗಳ ಬಳಗ ಬೆಂಗಳೂರು ಸಂಘವನ್ನು ಸಚಿವ ಕೆ.ಸಿ.ನಾರಾಯಣಗೌಡ ಮತ್ತು ಆದಿಚುಂಚುನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮಿ ಉದ್ಘಾಟಿಸಿದರು. ಅಧ್ಯಕ್ಷ ಮುಟ್ಟನಹಳ್ಳಿ ಶಿವರಾಮೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಬಾ.ಮಾ.ಹರೀಶ್, ಪ್ರೊ.ಕೃಷ್ಣೇಗೌಡ ಮತ್ತು ರಾಮನಗರ ಜಿಲ್ಲೆಯ ಜನಪದಲೋಕದ ಅಧ್ಯಕ್ಷರ ಟಿ.ತಿಮ್ಮೇಗೌಡ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಮಂಡ್ಯ ಜಿಲ್ಲಾ ಅನಿವಾಸಿಗಳ ಬಳಗ ಬೆಂಗಳೂರು ಸಂಘವನ್ನು ಸಚಿವ ಕೆ.ಸಿ.ನಾರಾಯಣಗೌಡ ಮತ್ತು ಆದಿಚುಂಚುನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮಿ ಉದ್ಘಾಟಿಸಿದರು. ಅಧ್ಯಕ್ಷ ಮುಟ್ಟನಹಳ್ಳಿ ಶಿವರಾಮೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಬಾ.ಮಾ.ಹರೀಶ್, ಪ್ರೊ.ಕೃಷ್ಣೇಗೌಡ ಮತ್ತು ರಾಮನಗರ ಜಿಲ್ಲೆಯ ಜನಪದಲೋಕದ ಅಧ್ಯಕ್ಷರ ಟಿ.ತಿಮ್ಮೇಗೌಡ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜಧಾನಿಯಲ್ಲಿ ‘ಮಂಡ್ಯ ಭವನ’ ನಿರ್ಮಾಣಕ್ಕೆ ಸಹಕಾರ ಕೋರಿದರೆ ನೆರವು ನೀಡಲಾಗುವುದು ಎಂದು ಸಚಿವ ಕೆ.ಸಿ.ನಾರಾಯಣಗೌಡ ಭರವಸೆ ನೀಡಿದರು.

ನಗರದ ಒಕ್ಕಲಿಗರ ಸಂಘದ ಆವರಣದ ಕುವೆಂಪು ಸಭಾಂಗಣದಲ್ಲಿ ಗುರುವಾರ ಮಂಡ್ಯ ಜಿಲ್ಲಾ ಅನಿವಾಸಿಗಳ ಬಳಗದ ಬೆಂಗಳೂರು ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಗೆ ವಿಶೇಷ ಸ್ಥಾನವಿದೆ. ಉದ್ಯೋಗಕ್ಕೆ ಅನೇಕರು ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಮಂಡ್ಯ ಭವನ ನಿರ್ಮಾಣಕ್ಕೆ ಮುಂದಾದಲ್ಲಿ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ADVERTISEMENT

ಆದಿಚುಂಚನಗಿರಿ ಮಠ ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಂಡ್ಯ ಜಿಲ್ಲೆಯ ಅಂದಾಜು 16 ಸಾವಿರ ಮಂದಿ ಮುಂಬೈನಲ್ಲಿ ನೆಲೆಸಿದ್ದು, ಮಠದ ಜತೆಗೂ ಉತ್ತಮ ಸಂಪರ್ಕ ಹೊಂದಿದ್ದಾರೆ ಎಂದು ತಿಳಿಸಿದರು.

ಜಾನಪದ ಲೋಕದ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ‘ಸಕ್ಕರೆ ನಾಡಿನ ಒಳಿತಿಗಾಗಿ ಇಂತಹ ಸಂಘವೊಂದರ ಅಗತ್ಯವಿತ್ತು. ಜಾತಿ,
ಭೇದವಿಲ್ಲದೆ ಎಲ್ಲ ಸಮಾಜದವರನ್ನು ಒಳಗೊಂಡು ಈ ಸಂಘ ಮುನ್ನೆಡಯಬೇಕು’ ಎಂದು ಆಶಿಸಿದರು.

ಮಂಡ್ಯ ಜಿಲ್ಲೆಯ ಸಮಗ್ರ ಏಳಿಗೆಗೆ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಂಘದ ಅಧ್ಯಕ್ಷ ಮುಟ್ಟನಹಳ್ಳಿ ಶಿವರಾಮೇಗೌಡ ಹೇಳಿದರು.

ಆದಿಚುಂಚನಗಿರಿಯ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ, ಪ್ರೊ.ಕೃಷ್ಣೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.