ADVERTISEMENT

Covid-19 Karnataka Update | 3.18 ಲಕ್ಷ ಪ್ರಕರಣ; 2.27 ಲಕ್ಷ ಮಂದಿ ಗುಣಮುಖ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2020, 15:33 IST
Last Updated 28 ಆಗಸ್ಟ್ 2020, 15:33 IST
   
""

ಬೆಂಗಳೂರು:ರಾಜ್ಯದಾದ್ಯಂತ ಆಗಸ್ಟ್ 28ರ ವರೆಗೆ ಒಟ್ಟು 3,18,752 ಕೋವಿಡ್‌–19 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಒಟ್ಟು 2,27,018 ಸೋಂಕಿತರು ಗುಣಮುಖರಾಗಿದ್ದಾರೆ ಎಂದುರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಶುಕ್ರವಾರ ಒಟ್ಟು 7,464 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 86,347 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. 754 ಜನರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.

8,960 ಹೊಸ ಪ್ರಕರಣ
ರಾಜ್ಯದಲ್ಲಿ ಇಂದು ಒಟ್ಟು 8,960 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 3.20 ಲಕ್ಷದ ಸನಿಹಕ್ಕೆ ತಲುಪಿದೆ.

ADVERTISEMENT

ಇಂದುರಾಜಧಾನಿ ಬೆಂಗಳೂರಿನಲ್ಲಿ 2,721, ಮೈಸೂರಿನಲ್ಲಿ 726, ಬಳ್ಳಾರಿಯಲ್ಲಿ 484, ದಕ್ಷಿಣ ಕನ್ನಡದಲ್ಲಿ 448, ದಾವಣಗೆರೆಯಲ್ಲಿ 379, ಶಿವಮೊಗ್ಗದಲ್ಲಿ 314, ಧಾರವಾಡದಲ್ಲಿ 299 ಹೊಸ ಪ್ರಕರಣಗಳು ವರದಿಯಾಗಿವೆ.

ಸಾವಿನ ಸಂಖ್ಯೆ 5,368
ಕೋವಿಡ್‌–19ನಿಂದಾಗಿ ಇಂದು ಒಟ್ಟು 136 ಸೋಂಕಿತರು ಮೃತಪಟ್ಟಿದ್ದಾರೆ.ಬೆಂಗಳೂರು ಒಂದರಲ್ಲೇ 41 ಮಂಧಿ ಹಾಗೂ ಮೈಸೂರಿನಲ್ಲಿ 17 ಜನರು ಮೃತಪಟ್ಟಿದ್ದಾರೆ. ಧಾರವಾಡದಲ್ಲಿ 9, ದಕ್ಷಿಣ ಕನ್ನಡ ಹಾಗೂ ದಾವಣಗೆರೆಯಲ್ಲಿ ತಲಾ 6 ಸೋಂಕಿತರು, ಬಳ್ಳಾರಿಯಲ್ಲಿ 5 ಮತ್ತು ಬೆಳಗಾವಿ, ಚಿಕ್ಕಮಗಳೂರು, ತುಮಕೂರು, ವಿಜಯಪುರದಲ್ಲಿ ತಲಾ 4 ಸೋಂಕಿತರು ಸಾವಿಗೀಡಾಗಿದ್ದಾರೆ.

ಗದಗ, ಕೋಲಾರ, ಕೊಪ್ಪಳ, ಉತ್ತರ ಕನ್ನಡ, ಬಾಗಲಕೋಟೆ, ಯಾದಗಿರಿಯಲ್ಲಿ ತಲಾ ಮೂವರು, ಉಡುಪಿ, ಮಂಡ್ಯ, ಕಲಬುರಗಿಯಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ಚಿಕ್ಕಬಳ್ಳಾಪುರ, ಹಾಸನ, ಕೊಡಗು, ರಾಯಚೂರು ಮತ್ತು ರಾಮನಗರದಲ್ಲಿ ತಲಾ 1 ಸಾವು ವರದಿಯಾಗಿದೆ.

ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 5,368ಕ್ಕೇರಿದೆ.

64,226 ಜನರಿಗೆ ಕೋವಿಡ್ ಟೆಸ್ಟ್
ಆಗಸ್ಟ್‌ 28ರಂದು ಒಟ್ಟು 64,226 ಜನರಿಗೆ ಕೋವಿಡ್–19 ಮಾದರಿ‌ ಪರೀಕ್ಷೆ ನಡೆಸಲಾಗಿದ್ದು, ಇದುವರೆಗೆ ಒಟ್ಟು27,13,034 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಇಂದು 23,416 ಆ್ಯಂಟಿಜೆನ್‌ ಪರೀಕ್ಷೆ ಮತ್ತು 40,810 ಮಂದಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.