ADVERTISEMENT

ಪರಿಹಾರಕ್ಕಾಗಿ ಚಾಲಕರು ಅರ್ಜಿ ಸಲ್ಲಿಸುವುದು ಬೇಡ; ಸದ್ಯವೇ ಮಾರ್ಗಸೂಚಿ: ಸವದಿ

​ಪ್ರಜಾವಾಣಿ ವಾರ್ತೆ
Published 6 ಮೇ 2020, 20:13 IST
Last Updated 6 ಮೇ 2020, 20:13 IST
   

ಬೆಂಗಳೂರು: ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ₹5,000 ಪರಿಹಾರ ನೀಡುವ ಸಂಬಂಧ ಮಾರ್ಗಸೂಚಿಯನ್ನು ಪ್ರಕಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಚಾಲಕರು ಪರಿಹಾರದ ಹಣವನ್ನು ಪಡೆಯಲು ಬೆಂಗಳೂರಿಗೆ ಬರಬಾರದು. ನಮ್ಮ ಕಚೇರಿಗೂ ಅರ್ಜಿ ಹಾಕಬಾರದು. ಮಾರ್ಗಸೂಚಿ ಅನ್ವಯ ಎಲ್ಲ ಚಾಲಕರಿಗೆ ಪರಿಹಾರ ಮೊತ್ತವನ್ನು ತಲುಪಿಸಲಾಗುವುದು. ಯಾರೂ ಆತುರ ಬಿದ್ದು, ಸಮಯ ಮತ್ತು ಹಣ ವ್ಯರ್ಥ ಮಾಡುವುದು ಬೇಡ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT