ADVERTISEMENT

ಮೈತ್ರಿ ಸರ್ಕಾರದ ಪತನಕ್ಕೆ ಸಾ.ರಾ.ಮಹೇಶ್‌ ಕಾರಣ: ಎಚ್‌. ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 19:57 IST
Last Updated 15 ಸೆಪ್ಟೆಂಬರ್ 2019, 19:57 IST
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್   

ಕೆ.ಆರ್.ನಗರ: ‘ಶಾಸಕ ಸಾ.ರಾ.ಮಹೇಶ್ ಅವರ ನಡವಳಿಕೆ, ದುರಹಂಕಾರದಿಂದಲೇ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಯಿತು’ ಎಂದು ಎಚ್.ವಿಶ್ವನಾಥ್ ಭಾನುವಾರ ಇಲ್ಲಿ ಆರೋಪಿಸಿದರು.

‘ದೇವೇಗೌಡರ ಕುಟುಂಬದವರ ಕಣ್ಣಲ್ಲಿ ನೀರು ತರಿಸಿದವರೇ ಸಾ.ರಾ.ಮಹೇಶ್. ದೇವೇಗೌಡರ ಬಗ್ಗೆ ನನಗೆ ಅಪಾರ ಕೃತಜ್ಞತೆ ಇದೆ. ಅದು ಸದಾ ಕಾಲ ಇರುತ್ತದೆ. ಆದರೆ, ಇವರಿಂದ ನನಗೆ ಯಾವುದೇ ಸಹಾಯವಾಗಿಲ್ಲ’ ಎಂದರು.

‘ಮಹೇಶ್ ಅವರ ದುರಹಂಕಾರದಿಂದ ಒಕ್ಕಲಿಗ ಸಮುದಾಯದ ನಾಲ್ವರು ಶಾಸಕರು ಜೆಡಿಎಸ್ ಬಿಟ್ಟು ಹೊರಬಂದರು. ಸಿದ್ದರಾಮಯ್ಯ ಅವರಿಂದ ರೋಸಿ ಹೋಗಿದ್ದ ಕುರುಬ ಸಮುದಾಯದ ನಾಲ್ವರು ಶಾಸಕರು ಹೊರಬಂದರು. ಅದನ್ನು ಅರ್ಥ ಮಾಡಿಕೊಳ್ಳಬೇಕು. ನಾವ್ಯಾರೂ ಮೂಲೆ ಗುಂಪಾಗಿದ್ದವರಲ್ಲ’ ಎಂದು ತಿರುಗೇಟು ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.