–ಪ್ರಜಾವಾಣಿ ಚಿತ್ರ
ಬಿಡದಿ: ಬಿಜೆಪಿ–ಜೆಡಿಎಸ್ನ ‘ಮೈಸೂರು ಚಲೋ’ ಪಾದಯಾತ್ರೆಯ ಮೊದಲ ದಿನ, ನಿರೀಕ್ಷಿಸಿದಷ್ಟು ಜನರು ಭಾಗವಹಿಸಲಿಲ್ಲ. ಈ ಬಗ್ಗೆ ‘ಮೈತ್ರಿ’ ನಾಯಕರು ಮಾತುಕತೆ ನಡೆಸಿದ್ದು, ಯಾತ್ರೆಯನ್ನು ಯಶಸ್ವಿಗೊಳಿಸಲು ಎರಡೂ ಪಕ್ಷಗಳ 10 ಮುಖಂಡರಿರುವ ಸಮನ್ವಯ ಸಮಿತಿ ರಚಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಯುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ‘ಮೊದಲ ದಿನ ಯಶಸ್ವಿಯಾಗಿದೆ. ಆದರೆ, ಕೊನೆಯ ಹಂತದ ಸಿದ್ಧತೆಯಲ್ಲಿ ಸ್ವಲ್ಪ ವ್ಯತ್ಯಾಸವಾದ ಕಾರಣ ಮೊದಲ ದಿನ ನಿರೀಕ್ಷೆಯಷ್ಟು ಜನರು ಸೇರಲಿಲ್ಲ. ಬಿಡದಿಯಿಂದ ಭಾನುವಾರ ಹೊರಡುವ ಪಾದಯಾತ್ರೆ ಭಿನ್ನವಾಗಿರಲಿದೆ. ರಾಮನಗರ ಭಾಗದ ಎರಡೂ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಈ ಯಾತ್ರೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಜನಾಂದೋಲನವಾಗಿ ರೂಪುಗೊಳ್ಳಲಿದೆ’ ಎಂದರು.
ಮೊದಲ ದಿನದ ಪಾದಯಾತ್ರೆ 16 ಕಿ.ಮೀ ಕ್ರಮಿಸಿ ಸಂಜೆ 6.40ಕ್ಕೆ ವಿರಾಮ ನೀಡಲಾಯಿತು. ಎರಡನೇ ದಿನದ ಯಾತ್ರೆ ಬಿಡದಿ ವೃತ್ತದಿಂದ ಭಾನುವಾರ ಬೆಳಿಗ್ಗೆ 9ಕ್ಕೆ ಆರಂಭವಾಗಿ ಕೆಂಗಲ್ವರೆಗೆ 22 ಕಿ.ಮೀ ಸಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.