ADVERTISEMENT

ಕಾಂಗ್ರೆಸ್ಸಿಗರೇ, ಇದಲ್ಲವೇ ನಿಮ್ಮ ಸಾಧನೆ?: ಬಿಜೆಪಿ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2022, 14:29 IST
Last Updated 25 ಮಾರ್ಚ್ 2022, 14:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೂಂಡಾಗಿರಿಗೆ ಒಪ್ಪಿಗೆ, ವ್ಯಾಪರಕ್ಕೂ ಕೋಮು ದ್ವೇಷದ ಲೇಪ ಹಚ್ಚಿದ್ದಾರೆ ಎಂಬ ಕಾಂಗ್ರೆಸ್‌ ಟೀಕೆಗೆ ಬಿಜೆಪಿ ತೀಕ್ಷ್ಣ ತಿರುಗೇಟು ನೀಡಿದೆ.

‘ಮತಾಂತರಕ್ಕೆ ಪ್ರೋತ್ಸಾಹ, ತ್ರಿವರ್ಣ ಧ್ವಜದ ಬಗ್ಗೆ ಸುಳ್ಳು ಆರೋಪದ ಅವಮಾನ, ಹಿಜಾಬ್‌ ಪರ, ಸಮವಸ್ತ್ರಕ್ಕೆ ವಿರೋಧ, ಹರ್ಷ ಕೊಲೆಗಡುಕರ ಪರ ಮೃದು ಧೋರಣೆ, ಕಾಶ್ಮೀರ ಹಿಂದೂಗಳ ಹತ್ಯೆಯ ಸಮರ್ಥನೆ, ವ್ಯಾಪಾರ ಬಂದ್‌ ಮಾಡಿದಾಗ ಪ್ರೋತ್ಸಾಹ, ಕಾಂಗ್ರೆಸ್ಸಿಗರೇ, ಇದಲ್ಲವೇ ನಿಮ್ಮ ಸಾಧನೆ!?’ ಎಂದು ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.

ಅಭಿವೃದ್ಧಿ ಕೆಲಸಗಳನ್ನು ತೋರಿಸಿ ಮತ ಕೇಳಲು ಮುಖವಿಲ್ಲದ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಬೆಂಕಿ ಹಚ್ಚಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿತ್ತು. ಜತೆಗೆ ಗೂಂಡಾಗಿರಿ, ಕೋಮುದ್ವೇಷ ಮತ್ತಿತರ ಆರೋಪಗಳ ಪಟ್ಟಿಯನ್ನೂ ಬಿಡುಗಡೆ ಮಾಡಿ #ಬಿಲ್ಡಪ್‌ಬೊಮ್ಮಾಯಿ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.