ADVERTISEMENT

ಸಿದ್ದರಾಮಯ್ಯ, ಡಿಕೆಶಿ ಹೇಳಿಕೊಟ್ಟಿದ್ದನ್ನೇ ಹೇಳಬೇಡಿ: ರಾಹುಲ್‌ ವಿರುದ್ಧ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 17:12 IST
Last Updated 1 ಅಕ್ಟೋಬರ್ 2022, 17:12 IST
ಭಾರತ್‌ ಜೋಡೊ ಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್‌, ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಮತ್ತಿತರರು | ಪಿಟಿಐ ಚಿತ್ರ
ಭಾರತ್‌ ಜೋಡೊ ಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್‌, ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಮತ್ತಿತರರು | ಪಿಟಿಐ ಚಿತ್ರ   

ಬೆಂಗಳೂರು: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿಕೊಟ್ಟಿದ್ದನ್ನು ಹಾದಿ-ಬೀದಿಯಲ್ಲಿ ಹೇಳುವಂತವರಾಗಬೇಡಿ. ಇದು ನಿಮ್ಮ ಅಪ್ರಬುದ್ದತೆಯನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎನ್. ರವಿಕುಮಾರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಶೇ 40 ರ ಲಂಚದ ಸರ್ಕಾರ ಎಂಬ ರಾಹುಲ್ ಟೀಕೆಯನ್ನು ಖಂಡಿಸಿರುವ ಅವರು, ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ. ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ, ಸುಖಾ ಸುಮ್ಮನೆ, ಪ್ರಚಾರಕ್ಕಾಗಿ ಆರೋಪ ಮಾಡಬೇಡಿ ಎಂದಿದ್ದಾರೆ.

ಈ ಹಿಂದಿನ ಕೇಂದ್ರದ ಮನಮೋಹನ ಸಿಂಗ್ ಮತ್ತು ರಾಜ್ಯದ ಸಿದ್ದರಾಮಯ್ಯ ಸರ್ಕಾರವೇ ಸಾಲು ಸಾಲು ಹಗರಣಗಳಲ್ಲಿ ಭಾಗಿಯಾಗಿತ್ತು ಎಂಬುವುದನ್ನು ನೀವು ಮರೆತಿದ್ದೀರಿ ಎಂದು ಅವರು ನೆನಪಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಮಕ್ಕಳಿಗಾಗಿ ಹಾಸಿಗೆ, ತಲೆದಿಂಬು ಖರೀದಿಸಿದಾಗ ಅಕ್ರಮ ನಡೆದಿತ್ತು.
ಅರ್ಕಾವತಿ ಬಡಾವಣೆಯ ರೀಡೂ, ಮರಳು ಲೂಟಿ, ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಖರೀದಿಯಲ್ಲಿ ಅಕ್ರಮ , ಬಿಬಿಎಂಪಿ ಕಸ ಹಾಗೂ ಕೊಳಗೇರಿ ಮಂಡಳಿಯ ಹಗರಣಗಳು ನಡೆದಿದ್ದವು. ಇದನ್ನು ನಿಮಗೆ ನೆನಪಿಸುತ್ತಿದ್ದೇವೆ ಎಂದು ರವಿಕುಮಾರ್ ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್ ಪಕ್ಷದ ಸದ್ಯದ ಪರಿಸ್ಥಿತಿ ಜೈಲ್ ಕಾಂಗ್ರೆಸ್, ಬೇಲ್ ಕಾಂಗ್ರೆಸ್ ಎಂಬಂತಿದೆ. ಅಂತಹ ಪಕ್ಷದವರ ಉಪದೇಶ ಬಿಜೆಪಿಗೆ ಅವಶ್ಯ ಇಲ್ಲಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.