ADVERTISEMENT

ಯಲ್ಲಾಪುರದಲ್ಲಿ ಪೂಜೆ ಮುಗಿಸಿ ಹೊರಟಿದ್ದ ಶ್ರೀಪಾದ ನಾಯಕ್ ಕುಟುಂಬ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 17:53 IST
Last Updated 11 ಜನವರಿ 2021, 17:53 IST
ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್‌
ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್‌   

ಯಲ್ಲಾಪುರ: ಯಲ್ಲಾಪುರಕ್ಕೆ ಭಾನುವಾರ ರಾತ್ರಿ 12 ಗಂಟೆಯ ಸುಮಾರಿಗೆ ಆಗಮಿಸಿದ ಕೇಂದ್ರ ಸಚಿವ ಶ್ರೀಪಾದ ನಾಯಕ್ ಹಾಗೂ ಕುಟುಂಬ, ಸೋಮವಾರ ಬೆಳಿಗ್ಗೆ ತಾಲ್ಲೂಕಿನ ಚಂದಗುಳಿ ಗಂಟೆ ಗಣಪತಿ ದೇವಸ್ಥಾನಕ್ಕೆ ತೆರಳಿ ಗಣಹವನದಲ್ಲಿ ಪಾಲ್ಗೊಂಡಿದ್ದರು.

ನಂತರ ದೇಹಳ್ಳಿ ಬಳಿಯ ಕೂಡಿಗೆಯ ವೈದಿಕರೊಬ್ಬರ ಮನೆಯಲ್ಲಿ ಚಂಡಿಕಾ ಹವನ ಪೂರೈಸಿ ಅಲ್ಲಿಯೇ ಊಟ ಮಾಡಿದ್ದರು. ಸಂಜೆ 4.45ಕ್ಕೆ ಅಲ್ಲಿಂದ ಹೊರಟು 5.10ಕ್ಕೆ ಬಿಕ್ಕು ಗುಡಿಗಾರ ಕಲಾ ಕೇಂದ್ರಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿದ್ದರು. ಅಲ್ಲಿನ ಕಲಾಕೃತಿ, ತಯಾರಿಕೆ ವೀಕ್ಷಿಸಿದ ನಂತರದಲ್ಲಿ ಜಿ.ಎಸ್.ಬಿ ಸಮಾಜ ಪ್ರಮುಖ ಗಜಾನನ ಭಟ್ಟ ಅವರ ಮನೆಗೆ ಭೇಟಿ ನೀಡಿದ್ದರು.

ನಂತರ ಗ್ರಾಮ ದೇವಿ ದೇವಸ್ಥಾನ ಹಾಗೂ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರದಲ್ಲಿ ಸ್ನೇಹಿತ ಬಿಕ್ಕು ಗುಡಿಗಾರ ಕಲಾ ಕೇಂದ್ರದ ಸಂತೋಷ ಗುಡಿಗಾರ, ಅರುಣ ಗುಡಿಗಾರ ಅವರ ಮನೆ ಭೇಟಿ ನೀಡಿ 7 ಗಂಟೆಗೆ ವಾಪಸ್ ಗೋಕರ್ಣಕ್ಕೆ ಹೊರಟಿದ್ದರು. ಸಚಿವರ ಪತ್ನಿ ವಿಜಯಾ ಅವರಿಗೆ ಸಂತೋಷ ಗುಡಿಗಾರ ಕುಟುಂಬದವರು ಉಡಿ ತುಂಬಿ ಬೀಳ್ಕೊಟ್ಟಿದ್ದರು.

ವಿಜಯಾ ಅವರಿಗೆ ಉಡಿ ತುಂಬಿದ ಸಂದರ್ಭದ ಫೋಟೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.