ಬೆಂಗಳೂರು: ವೃತ್ತಿ ದುರ್ನಡತೆ ತೋರಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್ಬಿಸಿ) ಇಬ್ಬರು ವಕೀಲರ ಸನ್ನದು ರದ್ದುಗೊಳಿಸಿದೆ.
‘ಮಂಗಳೂರಿನ ವಕೀಲ ಡಿ.ಪದ್ಮನಾಭ ಕುಮಾರ್ ಅವರ ಸನ್ನದು ರದ್ದುಪಡಿಸಲಾಗಿದ್ದು, ದೇಶದ ಯಾವುದೇ ನ್ಯಾಯಾಲಯ ಅಥವಾ ಪ್ರಾಧಿಕಾರದ ಮುಂದೆ ವಕೀಲಿಕೆ ಮಾಡದಂತೆ ಶಾಶ್ವತವಾಗಿ ತಡೆ ಹಿಡಿಯಲಾಗಿದೆ. ಬೆಳಗಾವಿಯ ಮತ್ತೊಬ್ಬ ವಕೀಲ ಪ್ರಭು ಶಿವಪ್ಪ ಯತ್ನಟ್ಟಿ ಅವರ ಸನ್ನದನ್ನೂ ಶಾಶ್ವತವಾಗಿ ರದ್ದುಪಡಿಸಲಾಗಿದ್ದು, ₹ 20 ಸಾವಿರ ದಂಡ ವಿಧಿಸಲಾಗಿದೆ‘ ಎಂದು ಅಧ್ಯಕ್ಷ ವಿಶಾಲ ರಘು ತಿಳಿಸಿದ್ದಾರೆ.
‘ಈ ಇಬ್ಬರ ವಿರುದ್ಧದ ವೃತ್ತಿ ದುರ್ನಡತೆ ಆರೋಪಗಳ ವಿಚಾರಣೆ ನಡೆಸಿದ ಪರಿಷತ್ನ ಶಿಸ್ತುಕ್ರಮ ಸಮಿತಿಯು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ‘ ಎಂದು ಪರಿಷತ್ ಕಾರ್ಯದರ್ಶಿ ಹೊರಡಿಸಿರುವ ಪ್ರಕಟಣೆಯಲ್ಲೂ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.