ADVERTISEMENT

ಪಶ್ಚಾತಾಪಪಟ್ಟರೆ ಅಮಾನತು ಹಿಂದಕ್ಕೆ?

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 19:44 IST
Last Updated 14 ಜನವರಿ 2020, 19:44 IST

ಬೆಂಗಳೂರು: ‘ಪಕ್ಕೆಲುಬು’ ವಿಡಿಯೊ ಕುಖ್ಯಾತಿಯ ಶಿಕ್ಷಕ ತಾನು ಮಾಡಿದ ಹೀನ ಕೃತ್ಯಕ್ಕೆ ಪಶ್ಚಾತಾಪಪಟ್ಟರೆ ಮಾತ್ರ ಶಿಕ್ಷಣ ಇಲಾಖೆ ಅಮಾನತು ಆದೇಶ ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌ ಸುರೇಶ್‌ ಕುಮಾರ್‌ ಅವರು ಈ ಕುರಿತು ಸುಳಿವು ನೀಡಿದ್ದಾರೆ.

ಈ ಸಂಬಂಧ ‘ಫೇಸ್‌ಬುಕ್‌’ ಮೂಲಕ ಸಚಿವ ಸುರೇಶ್‌ ಕುಮಾರ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆ ಶಿಕ್ಷಕ ಇವತ್ತು ನನ್ನನ್ನು ಭೇಟಿಯಾಗಲು ಬಂದಿದ್ದರು. ಆದರೆ, ಅವರಲ್ಲಿ ತಾವು ಮಾಡಿದ ಕೃತ್ಯದ ಬಗ್ಗೆ ಪಶ್ಚಾತಾಪದ ಲವಲೇಶವೂ ಕಂಡುಬರಲಿಲ್ಲ. ಅಮಾನತು ಆದೇಶ ರದ್ದು ಎಂಬ ಕಾರಣಕ್ಕೆ ತಪ್ಪಾಗಿದೆ ಎಂದು ಔಪಚಾರಿಕವಾಗಿ ಹೇಳಿದರು. ಅವರಲ್ಲಿ ಪ್ರಾಮಾಣಿಕತೆ ಕಂಡುಬರಲಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.