ADVERTISEMENT

ರೆಸಾರ್ಟ್‌ಗೆ ತೆರಳಿದ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸದಸ್ಯರು

ಅಧ್ಯಕ್ಷೆ ಸೌಭಾಗ್ಯ ಪದಚ್ಯುತಿಗೆ ಒಗ್ಗಟ್ಟು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 3:54 IST
Last Updated 26 ಜನವರಿ 2019, 3:54 IST
   

ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರನ್ನು ಪದಚ್ಯುತಿಗೊಳಿಸಲು ಪಕ್ಷಭೇದ ಮರೆತು ಒಂದಾಗಿರುವ ಸದಸ್ಯರು ಶುಕ್ರವಾರ ರಾತ್ರಿ ರೆಸಾರ್ಟ್‌ಗೆ ತೆರಳಿದ್ದಾರೆ.

ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 31 ಸದಸ್ಯರು ಅವಕಾಶ ಕೋರಿ ಪತ್ರ ನೀಡಿದ್ದರು. ಬಳಿಕ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಒಗ್ಗಟ್ಟು ಇರಲಿಲ್ಲ. ಇದನ್ನು ಮನಗಂಡ ಪಕ್ಷದ ಮುಖಂಡರು ಬಹುತೇಕ ಎಲ್ಲ ಸದಸ್ಯರನ್ನು ಗೋವಾ ಪ್ರವಾಸಕ್ಕೆ ಕಳುಹಿಸಿದ್ದಾರೆ.

ಶುಕ್ರವಾರ ರಾತ್ರಿ 10.45ರ ಸುಮಾರಿಗೆ ಸರ್ಕಾರಿ ಕಲಾ ಕಾಲೇಜು ಎದುರು ಸೇರಿದ ಸದಸ್ಯರು ಒಂದು ಬಸ್ ಹಾಗೂ 6 ಕಾರುಗಳಲ್ಲಿ ತೆರಳಿದರು.

ADVERTISEMENT
ಚಿತ್ರದುರ್ಗದಿಂದ ಗೋವಾಕ್ಕೆ ಹೊರಟ ಬಸ್ಸು
ಸದಸ್ಯರ ಲಗೇಜ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.