ADVERTISEMENT

ಭಾರತ ಒಡೆದವರಿಂದ ಜೋಡಿಸುವ ಯಾತ್ರೆ: ಬೊಮ್ಮಾಯಿ ವ್ಯಂಗ್ಯ 

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 6:50 IST
Last Updated 30 ಸೆಪ್ಟೆಂಬರ್ 2022, 6:50 IST
   

ವಿಜಯಪುರ: ಯಾರು ಭಾರತವನ್ನು ಒಡೆದರೋ( ತೋಡೊ) ಮಾಡಿದ್ದಾರೋ ಅವರಿಂದಲೇ ಭಾರತ ಜೋಡಿಸುವ ಯಾತ್ರೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ನಗರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಸಂಬಂಧ ಶುಕ್ರವಾರ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇತಿಹಾಸವನ್ನು ಯಾರು ಮರೆತಿಲ್ಲ. ರಾಜಕೀಯ ಅಸ್ತಿತ್ವಕ್ಕೆ ಹಾಗೂ ಅವರ ಒಳಗಿನ ಹುಳುಕು ಮುಚ್ಚಿಕೊಳ್ಳಲು ಯಾತ್ರೆ ನಡೆಸಿರುವುದು ವಿಪರ್ಯಾಸ ಎಂದರು.

ADVERTISEMENT

ದಸರಾ ಬಳಿಕ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ರಾಜ್ಯದಾದ್ಯಂತ ಜಂಟಿ ಪ್ರವಾಸ ನಡೆಸುವ ಮೂಲಕ ಚುನಾವಣೆ ಸಿದ್ಧತೆ ನಡೆಸುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.