ADVERTISEMENT

ಕೋರ್ಟ್‌ ಪ್ರಕರಣಗಳಿಂದ ನೇಮಕಾತಿ ವಿಳಂಬ: ಸಿ.ಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 15:25 IST
Last Updated 8 ಡಿಸೆಂಬರ್ 2023, 15:25 IST
<div class="paragraphs"><p>ಸಿ.ಎಂ. ಸಿದ್ದರಾಮಯ್ಯ</p></div>

ಸಿ.ಎಂ. ಸಿದ್ದರಾಮಯ್ಯ

   

ವಿಧಾನ ಪರಿಷತ್‌(ಬೆಳಗಾವಿ): ಅಧಿಕ ಸಂಖ್ಯೆಯ ಅಭ್ಯರ್ಥಿಗಳು ಕೋರ್ಟ್‌ ಮೊರೆ ಹೋಗುತ್ತಿರುವುದರಿಂದ ಕರ್ನಾಟಕ ಲೋಕಸೇವಾ ಆಯೋಗದ ಪ್ರತಿ ನೇಮಕಾತಿಯೂ ವಿಳಂಬವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿಯ ಎನ್‌.ರವಿಕುಮಾರ್, ಶಶೀಲ್‌ ನಮೋಶಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ, ಅಂಗವಿಕಲ ಅಭ್ಯರ್ಥಿಗಳ  ವೈದ್ಯಕೀಯ ತಪಾಸಣೆ, ಎಲ್ಲ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ, ಹಲವು ಹುದ್ದೆಗಳಿಗೆ ಒಬ್ಬರೇ ಆಯ್ಕೆಯಾದ ಪ್ರಕರಣಗಳೂ ಆಯ್ಕೆಯ  ವಿಳಂಬಕ್ಕೆ ಇತರೆ ಕಾರಣಗಳು ಎಂದು ವಿವರಿಸಿದ್ದಾರೆ.

ADVERTISEMENT

ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬ ತಪ್ಪಿಸಲು ಲೋಕಸೇವಾ ಆಯೋಗದ ಅಧಿಕಾರಿಗಳು, ಸದಸ್ಯರು ಹೆಚ್ಚುವರಿ ಸಮಯ ಹಾಗೂ ರಜಾ ದಿನಗಳಲ್ಲೂ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.