ADVERTISEMENT

ಪಕ್ಷಾಂತರಿಗಳಿಗೆ ಶಿಕ್ಷೆಯಾಗಲಿ: ಸಿದ್ದರಾಮಯ್ಯ ಹೇಳಿಕೆಯನ್ನು ಚೋದ್ಯವೆಂದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2022, 14:34 IST
Last Updated 24 ಜೂನ್ 2022, 14:34 IST
   

ಬೆಂಗಳೂರು: ಪಕ್ಷಾಂತರಿಗಳಿಗೆ ಶಿಕ್ಷೆಯಾಗಬೇಕೆಂದು ಸಿದ್ದರಾಮಯ್ಯನವರು ವಾದಿಸುವುದು ಚೋದ್ಯವೆಂದು ಬಿಜೆಪಿ ವ್ಯಂಗ್ಯವಾಡಿದೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ಪಕ್ಷಕ್ಕೆ ಕ್ರಾಸ್‌ ವೋಟಿಂಗ್‌ ಮಾಡಿದರೆ ಆತ್ಮಸಾಕ್ಷಿಯ ಮತ. ಶಿವಸೈನಿಕರು ಬಿಜೆಪಿಗೆ ಕ್ರಾಸ್‌ ವೋಟಿಂಗ್‌ ಮಾಡಿದರೆ ಅದು ಖರೀದಿ. ಕಾಂಗ್ರೆಸ್ಸಿಗರೇ, ನಿಮ್ಮ ಹತಾಶೆಯ ಬಗ್ಗೆ ನಮಗೆ ಕನಿಕರವಿದೆ’ ಎಂದು ಹೇಳಿದೆ.

‘ತೊಂಬತ್ತೊಂಬತ್ತು ಜಿಂಕೆಗಳನ್ನು ಕೊಂದು ತಿಂದ‌ ಹುಲಿ ಅಹಿಂಸಾವಾದದ ಪ್ರತಿಪಾದನೆಗಾಗಿ ಕಾಶಿಯತ್ರೆಗೆ ತೆರಳಿತ್ತಂತೆ. ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಪಕ್ಷಾಂತರ ಮಾಡಿದ ಸಿದ್ದರಾಮಯ್ಯ ಅವರು ಪಕ್ಷಾಂತರಿಗಳಿಗೆ ಶಿಕ್ಷೆಯಾಗಬೇಕೆಂದು ವಾದಿಸುವುದು ಚೋದ್ಯ’ ಎಂದು ಬಿಜೆಪಿ ಟೀಕಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.