ADVERTISEMENT

ಕೊರೊನಾ ಸೋಂಕು ಭೀತಿ | ರಸ್ತೆಯಲ್ಲೇ ಬೇಲಿ ಹಾಕಿ ಊರಿನ ಸಂಪರ್ಕ ‌ಬಂದ್

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 9:34 IST
Last Updated 26 ಮಾರ್ಚ್ 2020, 9:34 IST
   

ಹುಬ್ಬಳ್ಳಿ:ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಣ ಮಾಡಲು ಹುಬ್ಬಳ್ಳಿ ಹೊರವಲಯದ ಅಗ್ರಹಾರ ತಿಮ್ಮಸಾಗರ ಗ್ರಾಮದ ಹಿರಿಯರು ಸಂಪರ್ಕ ಕಲ್ಪಿಸುವ ಎರಡೂ ಮಾರ್ಗಗಳಿಗೆ ರಸ್ತೆಯಲ್ಲೇ ಬೇಲಿಯ ದಿಗ್ಬಂಧನ ಹಾಕಿ, ತಮ್ಮ ರಕ್ಷಣೆಗೆ ಮುಂದಾಗಿದ್ದಾರೆ.

ಅಂಚಟಗೇರಿಯಿಂದ ತಿಮ್ಮಸಾಗರಕ್ಕೆ ಬರುವ ಮತ್ತು ಹುಬ್ಬಳ್ಳಿ ನೇಕಾರನಗರದಿಂದ ಬರುವ ರಸ್ತೆಗಳಿಗೆ ಬೇಲಿ ಹಾಕಿ ರಸ್ತೆಯನ್ನೇ ಸಂಪೂರ್ಣ ಬಂದ್ ಮಾಡಿಸಿ ಜನ ಸಂಚಾರ ಸಂಪೂರ್ಣ ಸ್ಥಗಿತ ಮಾಡಿದ್ದಾರೆ.

ಸೋಂಕು ಹರಡುವ ಭೀತಿಯಿಂದ ಈ ಕ್ರಮ ಕೈಗೊಂಡಿದ್ದು, ಊರಿಗೆ ಯಾರೂ ಬಾರದಂತೆ, ಊರಿನಿಂದ ಯಾರೂ ಹೊರಹೋಗದಂತೆ ಹೀಗೆ ಮಾಡಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.