ದಾವಣಗೆರೆ: ಹರಪನಹಳ್ಳಿ ತಾಲ್ಲೂಕಿನ ರಾಗಿ ಮಸಲವಾಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ₹ 16 ಲಕ್ಷ ಅವ್ಯವಹಾರದ ಸಂಬಂಧ ಇಬ್ಬರು ಐಎಎಸ್ ಹಾಗೂ 4 ಜನ ಕೆಎಎಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಹರಪನಹಳ್ಳಿ ಜೆಎಂಎಫ್ಸಿ ನ್ಯಾಯಾಲಯದಹಿರಿಯ ಸಿವಿಲ್ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಅವ್ಯವಹಾರದ ಸಂಬಂಧ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಶೇಖರಗೌಡ, ಜಿಲ್ಲಾ ಪಂಚಾಯಿತಿ ಸಿಇಒಗಳಾಗಿದ್ದ ಎಸ್. ಅಶ್ವತಿ, ಎಚ್. ಬಸವರಾಜೇಂದ್ರ, ಕೆಎಎಸ್ ಅಧಿಕಾರಿಗಳಾದ ಮಮತಾ ಹೊಸಗೌಡರ, ಷಡಕ್ಷರಪ್ಪ, ಭೀಮಾನಾಯ್ಕ್,ತಿಪ್ಪೇಸ್ವಾಮಿ, ಪಿಡಿಒ ಎಸ್. ನಾಗರಾಜ್, ಅಧಿಕಾರಿಗಳಾದ ಬಸವರಾಜ್,ಪೂಜಾ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶಿಸಿದೆ.
‘ಗ್ರಾಮ ಪಂಚಾಯಿತಿಯಲ್ಲಿ 2009–10, 2010–11ರ ಸಾಲಿನಲ್ಲಿ ₹ 50 ಲಕ್ಷ ಅವ್ಯವಹಾರ ನಡೆದಿತ್ತು. ಇದರಲ್ಲಿ ₹ 16 ಲಕ್ಷದ ಅವ್ಯವಹಾರ ಸಂಬಂಧ ದಾಖಲೆಯೊಂದಿಗೆ ಲೋಕಾಯುಕ್ತಕ್ಕೆ 2013ರಲ್ಲಿ ದೂರು ನೀಡಲಾಗಿತ್ತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ದೂರು ಸಲ್ಲಿಸಲಾಗಿತ್ತು. ಆದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಆರ್. ಚಿಕ್ಕನಗೌಡ ನ್ಯಾಯಾಲಯದಲ್ಲಿ 2019ರ ಆಗಸ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು’ ಎಂದುಗುರುವಾರ ಪತ್ರಿಕಾಗೋಷ್ಠಿಯಲ್ಲಿ ಭ್ರಷ್ಟಾಚಾರ ವಿರೋಧಿ ವೇದಿಕೆ ಕರ್ನಾಟಕದ ರಾಜ್ಯಾಧ್ಯಕ್ಷಎ.ಉಮೇಶ್, ಗೌರವಾಧ್ಯಕ್ಷ ಗುರುಪಾದಯ್ಯ ಮಠದ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.