ADVERTISEMENT

Covid-19 Karnataka Updates: 227 ಹೊಸ ಪ್ರಕರಣ, 12 ಜಿಲ್ಲೆಗಳಲ್ಲಿ ಶೂನ್ಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 13:58 IST
Last Updated 26 ಅಕ್ಟೋಬರ್ 2021, 13:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 24 ಗಂಟೆಗಳಲ್ಲಿ ರಾಜ್ಯದಲ್ಲಿ 277 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 7 ಮಂದಿ ಮೃತಪಟ್ಟಿದ್ದು, 343 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಸೋಂಕಿತರ ಒಟ್ಟು ಸಂಖ್ಯೆ29,86,553ಕ್ಕೆ ಏರಿದ್ದು, 29,39,990ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ನಿಂದ ಈ ವರೆಗೆ 38,024 ಮಂದಿ ಸಾವಿಗೀಡಾಗಿದ್ದಾರೆ.

‌ರಾಜ್ಯದಲ್ಲಿ ಸದ್ಯ 8,510 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ದೃಢ ಪ್ರಮಾಣ ಶೇಕಡಾ 0.36 ರಷ್ಟಿದೆ. ಮರಣ ಪ್ರಮಾಣ ಶೇಕಡಾ 2.52ರಷ್ಟಿದೆ.

ADVERTISEMENT

ಬೆಂಗಳೂರಿನಲ್ಲಿ 169 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಮೂವರು ಸಾವಿಗೀಡಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ 23 ಮೈಸೂರಿನಲ್ಲಿ 19 ಪ್ರಕರಣ ದಾಖಲಾಗಿವೆ.

12 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.