ADVERTISEMENT

Covid Karnataka Updates: ಸಕ್ರಿಯ ಪ್ರಕರಣ ಮತ್ತಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 20:06 IST
Last Updated 14 ಫೆಬ್ರುವರಿ 2022, 20:06 IST
   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ. ಸದ್ಯ 31,215 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ‍ಪಡೆದುಕೊಳ್ಳುತ್ತಿದ್ದಾರೆ.

ಕೋವಿಡ್ ಪರೀಕ್ಷೆಗಳ ಸಂಖ್ಯೆ ಇಳಿಕೆ ಕಂಡಿದ್ದು,ಒಂದು ದಿನದ ಅವಧಿಯಲ್ಲಿ 69 ಸಾವಿರ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಹೊಸ ಪ್ರಕರಣಗಳ ಸಂಖ್ಯೆ 1,568ಕ್ಕೆ ಇಳಿಕೆಯಾಗಿದೆ.ಸೋಂಕು ದೃಢ ಪ್ರಮಾಣ ಶೇ 2.25 ರಷ್ಟು ವರದಿಯಾಗಿದೆ.ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 39.28 ಲಕ್ಷಕ್ಕೆ ಏರಿಕೆಯಾಗಿದೆ.

ಹೊಸ ಪ್ರಕರಣಗಳು 26 ಜಿಲ್ಲೆಗಳಲ್ಲಿ ಎರಡು ಅಂಕಿಯಲ್ಲಿ ದೆ.ಬೆಂಗಳೂರಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮತ್ತಷ್ಟುಇಳಿಕೆಕಂಡಿದ್ದು, 754 ಮಂದಿ ಸೋಂಕಿತರಾಗಿದ್ದಾರೆ. ಶಿವಮೊಗ್ಗದಲ್ಲಿ 91, ಮೈಸೂರಿನಲ್ಲಿ 78, ಬೆಳಗಾವಿಯಲ್ಲಿ 63, ದಕ್ಷಿಣ ಕನ್ನಡದಲ್ಲಿ 55 ಹಾಗೂ ಬಳ್ಳಾರಿಯಲ್ಲಿ 50ಮಂದಿಕೋವಿಡ್ ಪೀಡಿತರಾಗಿದ್ದಾರೆ.ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 50ಕ್ಕಿಂತ ಕಡಿಮೆ ಇವೆ.

ADVERTISEMENT

ಸೋಂಕಿತರಲ್ಲಿ ಬೆಂಗಳೂರಿನಲ್ಲಿ 2,089 ಮಂದಿ ಸೇರಿದಂತೆ ರಾಜ್ಯದಲ್ಲಿ 6,025 ಮಂದಿ ಚೇತರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.