ADVERTISEMENT

ಬಿಜೆಪಿ ಬ್ಯಾನರ್‌ ಮುಂದೆ ನಿಂತು ರೇಷನ್ ಕಿಟ್‌ ಹಂಚಿದ ತೇಜಸ್ವಿ: ಕಾಂಗ್ರೆಸ್‌ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2021, 10:34 IST
Last Updated 11 ಜುಲೈ 2021, 10:34 IST
   

ಬೆಂಗಳೂರು: ಬಿಜೆಪಿ ಬ್ಯಾನರ್‌ ಮುಂದೆ ನಿಂತು ಸರ್ಕಾರದ ರೇಷನ್‌ ಕಿಟ್‌ ಹಂಚಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.

ಈ ವಿಚಾರವಾಗಿ ಭಾನುವಾರ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ಸರ್ಕಾರಿ ಲಸಿಕೆಯ ಬಾಟಲಿಗೆ ತಮ್ಮ ಫೋಟೋ ಅಂಟಿಸಿ ಹಣಕ್ಕೆ ಮಾರಿಕೊಂಡಿದ್ದ ತೇಜಸ್ವಿ ಸೂರ್ಯ ಅವರೀಗ ಬಿಜೆಪಿ ಬ್ಯಾನರ್ ಮುಂದೆ ನಿಂತು ರೇಷನ್ ಕಿಟ್‌ಗಳನ್ನು ಹಂಚಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದೇ ವೇಳೆ ಸಚಿವ ಜಗದೀಶ್‌ ಶೆಟ್ಟರ್‌ ಅವರು ಕಾರ್ಮಿಕ ಇಲಾಖೆಯ ಕಿಟ್‌ಗಳಿಗೆ ತಮ್ಮ ಫೋಟೋ ಅಂಟಿಸಿ ಹಂಚಿದ್ದಾರೆ ಎಂದೂ ಕಾಂಗ್ರೆಸ್‌ ಆರೋಪಿಸಿದೆ.

ADVERTISEMENT

ಅಧಿಕಾರ ದುರ್ಬಳಕೆಗೆ ಮಿತಿ ಬೇಡವೇ ಎಂದು ಪ್ರಶ್ನಿಸಿರುವ ಕಾಂಗ್ರೆಸ್‌ ಪಕ್ಷವು ರಾಜ್ಯ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.