ADVERTISEMENT

ಡಿಕೆಶಿ ಅಂತರಂಗ ಅವರಿಗೇ ಗೊತ್ತು: ಸಿ.ಟಿ ರವಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 2:54 IST
Last Updated 10 ಅಕ್ಟೋಬರ್ 2020, 2:54 IST
ಸಿ.ಟಿ.ರವಿ 
ಸಿ.ಟಿ.ರವಿ    

ಕಡೂರು: ‘ಮಾತಿನಿಂದ ಜಗತ್ತನ್ನು ಮೆಚ್ಚಿಸಬಹುದು. ಆದರೆ, ನಮಗೆ ನಾವು ಸುಳ್ಳು ಹೇಳಿಕೊಳ್ಳಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ‍ಅವರ ಅಂತರಂಗ ಅವರಿಗೇ ಗೊತ್ತು’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದರು.

‘ತತ್ವಜ್ಞಾನಿಯೋ ಅಥವಾ ಇನ್ನೇನೋ ಎಂಬುದನ್ನು ಸಚಿವ ರವಿ ನಿರ್ಧರಿಸಲಿ’ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದರು. ಅವರು ತಾಲ್ಲೂಕಿನ ಜೋಡಿಹೋಚಿಹಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

‘ಹೊರಜಗತ್ತಿಗೆ ಸುಳ್ಳು ಹೇಳಿದರೂ ನಮ್ಮೊಳಗಿನ ಚೈತನ್ಯಕ್ಕೆ ಸುಳ್ಳು ಹೇಳಲಾಗದು. ದೇಹದೊಳಗಿನ ಭಗವಂತನನ್ನು ಮೆಚ್ಚಿಸಲು ಸುಳ್ಳಿನಿಂದ ಸಾಧ್ಯವಿಲ್ಲ. ನಮ್ಮೊಳಗಿನ ಚೈತನ್ಯ ಸದಾ ಎಚ್ಚರಿಸುತ್ತಿರುತ್ತದೆ. ಡಿ.ಕೆ.ಶಿವಕುಮಾರ್ ಯಾರೆಂದು ಅವರೇ ನಿರ್ಧರಿಸಲಿ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.