ADVERTISEMENT

ವಿಜಯಪುರ | ಸಿಡಿಲಿಗೆ ಆಕಳು ಬಲಿ; ಬಾಳೆ ತೋಟಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 26 ಮೇ 2020, 16:47 IST
Last Updated 26 ಮೇ 2020, 16:47 IST
ವಿಜಯಪುರ ಜಿಲ್ಲೆ ನಾಲತವಾಡದಲ್ಲಿ ಗಾಳಿ ಮಳೆಗೆ ನೆಲಕ್ಕುರುಳಿರುವ ಬಾಳೆ ಗಿಡಗಳನ್ನು ತೋರಿಸುತ್ತಿರುವ ರೈತರು
ವಿಜಯಪುರ ಜಿಲ್ಲೆ ನಾಲತವಾಡದಲ್ಲಿ ಗಾಳಿ ಮಳೆಗೆ ನೆಲಕ್ಕುರುಳಿರುವ ಬಾಳೆ ಗಿಡಗಳನ್ನು ತೋರಿಸುತ್ತಿರುವ ರೈತರು   

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗಬೇನಾಳ ಗ್ರಾಮದ ಪಂಚಯ್ಯ ಸಾಲಿಮಠ ಅವರ ಹಟ್ಟಿಯಲ್ಲಿ ಕಟ್ಟಿದ್ದ ಹಸು ಸೋಮವಾರ ರಾತ್ರಿ ಸಿಡಿಲಿಗೆ ಬಲಿಯಾಗಿದೆ.

ನಾಲತವಾಡ ಸುತ್ತಮುತ್ತ ಭಾರೀ ಗಾಳಿಯೊಂದಿಗೆ ಗುಡುಗು ಸಿಡಿಲು ಸಹಿತ ಸುಮಾರು ಎರಡು ಗಂಟೆ ಬಿರುಸಿನ ಮಳೆಯಾಗಿದೆ. ಭಾರಿ ಗಾಳಿಗೆ 14 ರೈತರಿಗೆ ಸೇರಿದ ಸುಮಾರು 30 ಎಕರೆ ಬಾಳೆ ತೋಟಕ್ಕೆ ಹಾನಿಯಾಗಿದೆ. ಬಾಳೆ ಗಿಡಗಳು ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT