ADVERTISEMENT

ರಾಜ್ಯದಲ್ಲಿ 2 ಸಾವಿರ ದಾಟಿದ ಡೆಂಗಿ ಪ್ರಕರಣ

ಈ ವರ್ಷ 39,680 ಡೆಂಗಿ ಶಂಕಿತರ ಗುರುತು

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 19:30 IST
Last Updated 19 ಜೂನ್ 2022, 19:30 IST
   

ಬೆಂಗಳೂರು:ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿಡೆಂಗಿಜ್ವರಕ್ಕೆ ಒಳಪಡುವವರ ಸಂಖ್ಯೆ ಏರಿಕೆ ಕಂಡಿದ್ದು, ಈ ತಿಂಗಳು 346 ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಈವರೆಗೆ ಡೆಂಗಿ ಜ್ವರಕ್ಕೆ ಒಳಪಟ್ಟವರ ಒಟ್ಟು ಸಂಖ್ಯೆ 2 ಸಾವಿರದ ಗಡಿ (2,060) ದಾಟಿದೆ.

ಈ ವರ್ಷ 39,680ಡೆಂಗಿಶಂಕಿತರನ್ನು ಗುರುತಿಸಿ,ತಪಾಸಣೆಗೆ ಒಳಪಡಿಸಲಾಗಿದೆ. 16,962 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 15,502 ಮಂದಿಯಲ್ಲಿಡೆಂಗಿಶಂಕೆ ವ್ಯಕ್ತವಾಗಿದ್ದು, 388 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. ಈ ವರ್ಷ ಡೆಂಗಿ ಜ್ವರಕ್ಕೆ ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ.2021 ರಲ್ಲಿ 7,189 ಮಂದಿಡೆಂಗಿಪೀಡಿತರಾಗಿದ್ದರು. ಅವರಲ್ಲಿ ಐವರುಮೃತಪಟ್ಟಿದ್ದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಡೆಂಗಿಪ್ರಕರಣಗಳು ಪತ್ತೆಯಾಗಿವೆ.ಪ್ರಕರಣಗಳ ಸಂಖ್ಯೆ ನಾಲ್ಕು ಜಿಲ್ಲೆಗಳಲ್ಲಿ ಮೂರಂಕಿ, 25 ಜಿಲ್ಲೆಗಳಲ್ಲಿ ಎರಡಂಕಿಯಲ್ಲಿದೆ.ಉಡುಪಿಯಲ್ಲಿ 244, ಮೈಸೂರಿನಲ್ಲಿ 171,ಚಿತ್ರದುರ್ಗದಲ್ಲಿ 108, ದಕ್ಷಿಣ ಕನ್ನಡದಲ್ಲಿ 104,ಕೊಪ್ಪಳದಲ್ಲಿ 95,ಶಿವಮೊಗ್ಗದಲ್ಲಿ 92, ಬಳ್ಳಾರಿಯಲ್ಲಿ 89, ವಿಜಯಪುರದಲ್ಲಿ 85, ದಾವಣಗೆರೆಯಲ್ಲಿ 70, ಕಲಬುರ್ಗಿಯಲ್ಲಿ 61 ಹಾಗೂಹಾಸನದಲ್ಲಿ 51 ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 50ಕ್ಕಿಂತ ಕಡಿಮೆ ಇವೆ.

ADVERTISEMENT

27 ಜಿಲ್ಲೆಗಳಲ್ಲಿಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ.12 ಸಾವಿರಕ್ಕೂ ಅಧಿಕ ಮಂದಿಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 7 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ474 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ. ವಿಜಯಪುರದಲ್ಲಿ 96, ಕೋಲಾರದಲ್ಲಿ 76,ಬೆಂಗಳೂರು ಗ್ರಾಮಾಂತರದಲ್ಲಿ 44, ತುಮಕೂರಿನಲ್ಲಿ 36, ಚಿತ್ರದುರ್ಗದಲ್ಲಿ 28, ದಾವಣಗೆರೆಯಲ್ಲಿ 20, ಹಾಸನದಲ್ಲಿ 19, ಕಲಬುರ್ಗಿಯಲ್ಲಿ 16, ರಾಮನಗರದಲ್ಲಿ 14, ಶಿವಮೊಗ್ಗದಲ್ಲಿ 12, ಬಾಗಲಕೋಟೆಯಲ್ಲಿ 11 ಹಾಗೂ ಮಂಡ್ಯದಲ್ಲಿ 10 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 10ಕ್ಕಿಂತ ಕಡಿಮೆ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.