ADVERTISEMENT

ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ರಾತ್ರಿ ಕಳೆದ ಡಿಕೆಶಿ

ಅಜಿತ್ ಅತ್ರಾಡಿ
Published 4 ಸೆಪ್ಟೆಂಬರ್ 2019, 4:04 IST
Last Updated 4 ಸೆಪ್ಟೆಂಬರ್ 2019, 4:04 IST
ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ)
ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ)   

ನವದೆಹಲಿ:ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿಯೇ ಮಂಗಳವಾರ ರಾತ್ರಿಯನ್ನು ಕಳೆದರು.

ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮುಗಿದ ನಂತರ ಶಿವಕುಮಾರ್ ಅವರನ್ನು ನಿರ್ದೇಶನಾಲಯದ ಅಧಿಕಾರಿಗಳು ಕಚೇರಿಗೆ ಕರೆದೊಯ್ದರು.

ದೆಹಲಿಗೆ ಧಾವಿಸಿದ್ದ ಶಿವಕುಮಾರ್ ಬೆಂಬಲಿಗರು ಆಸ್ಪತ್ರೆಗೆ ಭೇಟಿ ನೀಡಿ, ನಾಯಕನ ಸ್ಥಿತಿ ಕಂಡು ಮರುಕಪಟ್ಟರು. ಓರ್ವ ಅಭಿಮಾನಿ ತನ್ನ ಅಂಗಿ ಹರಿದುಕೊಂಡು ಜೋರಾಗಿ ಅಳುತ್ತಾ ರಸ್ತೆಯ ಮೇಲೆ ಉರುಳಾಡಿದ.

ADVERTISEMENT

ತಿಲಕ್ ಮಾರ್ಗ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲು ಕೆಲ ಬೆಂಬಲಿಗರು ಮುಂದಾದರು. ಆದರೆ ಪೊಲೀಸರ ಅವರನ್ನು ಚದುರಿಸಿದರು. ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.