ADVERTISEMENT

ವಿಜಯೇಂದ್ರಗೆ ಟಿಕೆಟ್ ತಪ್ಪಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ- ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 25 ಮೇ 2022, 11:15 IST
Last Updated 25 ಮೇ 2022, 11:15 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: 'ಬಿಜೆಪಿ ಉಪಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ಟಿಕೆಟ್ ತಪ್ಪಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಭವಿಷ್ಯದಲ್ಲಿ ಅವರಿಗೆ ಹೈಕಮಾಂಡ್ದೊಡ್ಡಅವಕಾಶಕಲ್ಪಿಸಿಕೊಡುವಭರವಸೆನನಗಿದೆ' ಎಂದು ಶಾಸಕ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, 'ಈ ಬಾರಿಯ ಚುನಾವಣೆಯಲ್ಲಿ ಪಕ್ಷ ವಿಜಯೇಂದ್ರ ಅವರಿಗೆ ನಾನಾ ಕಾರಣಗಳಿಗಾಗಿ ಟಿಕೆಟ್ ನೀಡದೇ ಇರಬಹುದು. ಆದರೆ, ಸೂಕ್ತ ಸಂದರ್ಭದಲ್ಲಿ ಅವಕಾಶ ದೊರಕಿಸಿಕೊಡಲಿದೆ.‌ ಸಾಮರ್ಥ್ಯಮತ್ತುಪಕ್ಷದಲ್ಲಿನಿಷ್ಠೆಇರುವವರನ್ನುಪಕ್ಷ‌ಯಾವತ್ತೂಕೈಬಿಡಲ್ಲ' ಎಂದರು.

'2023ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕುಅನ್ನುವುದೇನಮ್ಮ‌ಗುರಿ.ಆನಿಟ್ಟಿನಲ್ಲಿಏನೆಲ್ಲಪ್ರಯತ್ನಗಳನ್ನುಮಾಡಬೇಕೋಅದನ್ನುಈಗಿನಿಂದಲೇಮಾಡುತ್ತೇವೆ.ಮುಂದಿನ‌ಚುನಾವಣೆಯಲ್ಲಿಬಿಜೆಪಿ‌ಮತ್ತೆಅಧಿಕಾರಹಿಡಿಯುವವಿಶ್ವಾಸಇದೆ. ಪ್ರಧಾನಿನರೇಂದ್ರಮೋದಿಅವರನೇತೃತ್ವದಲ್ಲಿನಾವು ಸ್ಪಷ್ಟಬಹುಮತಪಡೆದುಮತ್ತೆಅಧಿಕಾರಕ್ಕೆಬರುತ್ತೇವೆ' ಎಂದುವಿಶ್ವಾಸವ್ಯಕ್ತಪಡಿಸಿದರು.

ADVERTISEMENT

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಲು ಕಾರಣ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿದ ಅವರು, 'ಅದೆಲ್ಲ ಮಾಧ್ಯಮಗಳು ಸೃಷ್ಟಿಸಿದ ಊಹಾಪೋಹ. ಇದಕ್ಕೂ ಅವರಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ' ಎಂದರು.

ಮುಂದಿನ‌ವಿಧಾಸಭೆಯಲ್ಲಿವಿಜಯೇಂದ್ರಗೆಟಿಕೆಟ್ಸಿಗುತ್ತಾಎಂಬಪ್ರಶ್ನೆಗೆ, 'ಈಗಲೇ ಅದರಬಗ್ಗೆಯಾಕೆಚರ್ಚೆ. ಸಮಯ‌ ಬಂದಾಗ ಅದರ ಬಗ್ಗೆ ನೋಡೋಣ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.