ADVERTISEMENT

ಹಂಪಿ‌ ಸುತ್ತಮುತ್ತ ಭೂಕಂಪನ; ವದಂತಿ ಎಂದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 6:27 IST
Last Updated 5 ಜೂನ್ 2020, 6:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ: ಇಲ್ಲಿನ ವಿಶ್ವ ಪಾರಂಪರಿಕ ತಾಣ ಹಂಪಿ ಸುತ್ತಮುತ್ತ ಶುಕ್ರವಾರ ನಸುಕಿನ ಜಾವ ಭೂಕಂಪನ ಆಗಿದೆ ಎನ್ನುವುದು ಕೇವಲ‌ ವದಂತಿಯಷ್ಟೇ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸ್ಪಷ್ಟಪಡಿಸಿದ್ದಾರೆ.

ಹಂಪಿ ಸುತ್ತಮುತ್ತ ಭೂಕಂಪನ ಆಗಿಲ್ಲ. ಒಂದುವೇಳೆ ಆಗಿದ್ದರೆ ಅದರ ಪ್ರಮಾಣ ದಾಖಲಾಗುತ್ತಿತ್ತು. ಆದರೆ, ಭೂಗರ್ಭ ಶಾಸ್ತ್ರಜ್ಞರು ಆ ರೀತಿಯ ಯಾವುದೇ ಘಟನೆ ಘಟಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಸುಕಿನ ಜಾವ ಹಂಪಿ ಸುತ್ತಮುತ್ತ ಲಘು ಭೂಕಂಪನವಾಗಿದೆ ಎಂಬ ಸುದ್ದಿ ಶುಕ್ರವಾರ ಎಲ್ಲೆಡೆ ಹಬ್ಬಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.