ADVERTISEMENT

ರೈಲು ತಡೆಗೋಡೆಗೆ ಸಿಲುಕಿ ಮೃತಪಟ್ಟ ಆನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 5:09 IST
Last Updated 15 ಡಿಸೆಂಬರ್ 2018, 5:09 IST
   

ಮೈಸೂರು: ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಬಳಿ ರೈಲು ಹಳಿ ತಡೆಗೋಡೆ ದಾಟುವಾಗ ಆನೆಯೊಂದು ಮೃತಪಟ್ಟಿದೆ‌.

ತಡೆಗೋಡೆ ದಾಟಿದ್ದ ಮೂರು ಆನೆಗಳುವೀರನಹೊಸಹಳ್ಳಿ ವಲಯದಿಂದ ಸಮೀಪದ ಗ್ರಾಮಕ್ಕೆ ಶುಕ್ರವಾರ ರಾತ್ರಿ ದಾಳಿ ಇಟ್ಟಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸಿದ್ದರು.

ಇಲಾಖೆ ಕಾರ್ಯಾಚೆನೆ ವೇಳೆ ತಪ್ಪಿಸಿಕೊಂಡಿದ್ದ ಒಂದು ಆನೆ, ರೈಲು ತಡೆಗೋಡೆಗೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದೆ‌. ಮೃತದೇಹ ತಡೆಗೋಡೆಯಲ್ಲೆ ಸಿಲುಕಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ

ADVERTISEMENT

ಮೃತಪಟ್ಟ ಆನೆ ಪುಂಡಾನೆಯಾಗಿದ್ದು ಇಲಾಖೆ ಕಾರ್ಯಾಚರಣೆ ವೇಳೆ ಅರಣ್ಯಕ್ಕೆ ಹಿಂದಿರುಗದೆ ತಪ್ಪಿಸಿಕೊಂಡಿತ್ತು. ನಾಗರಹೊಳೆ ಮುಖ್ಯದ್ವಾರ ತೆರೆದಿದ್ದರೂ, ರೈಲು ಹಳಿ ದಾಟುವ ಪ್ರಯತ್ನದಲ್ಲಿ ಈ ಘಟನೆ ಸಂಭವಿಸಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.