ADVERTISEMENT

ಸಾರ್ವಜನಿಕ ಅಧಿಕಾರಕ್ಕೆ ಕಿತ್ತಾಟ ತಪ್ಪೇ: ಸಚಿವ ಈಶ್ವರಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 16:00 IST
Last Updated 5 ಫೆಬ್ರುವರಿ 2020, 16:00 IST
ಸಚಿವ ಕೆ.ಎಸ್. ಈಶ್ವರಪ್ಪ 
ಸಚಿವ ಕೆ.ಎಸ್. ಈಶ್ವರಪ್ಪ    

ಶಿವಮೊಗ್ಗ: ‘ಅಪ್ಪನ ಆಸ್ತಿಹಂಚಿಕೊಳ್ಳಲು ಹೊಡೆದಾಡುತ್ತಾರೆ. ಹೀಗಿರುವಾಗ ಸಾರ್ವಜನಿಕ ಅಧಿಕಾರ ಪಡೆಯಲುಕಿತ್ತಾಟ ನಡೆಸುವುದುತಪ್ಪೇ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಗೆ ಸ್ಪಷ್ಟ ಬಹುಮತ ಇದ್ದಿದ್ದರೆ ಇಂತಹ ಪ್ರಮೇಯ ಬರುತ್ತಿರಲಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದವರಿಗೆ ಆದ್ಯತೆ ನೀಡುವುದು ಅನಿವಾರ್ಯ.ವರಿಷ್ಠರ ಸೂಚನೆಯಂತೆ ಅವರೆಲ್ಲ ಗುರುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.ಸಂಪುಟ ವಿಸ್ತರಣೆಯ ನಂತರ ಚರ್ಚಿಸಿ, ಖಾತೆಗಳ ಹಂಚಿಕೆ ಮಾಡಲಾಗುತ್ತದೆ’ ಎಂದರು.

‘ಬೇರೆ ಪಕ್ಷದ ಶಾಸಕರನ್ನು ಕರೆತರುವಲ್ಲಿ, ಬಿಜೆಪಿ ಅಧಿಕಾರ ಹಿಡಿಯುವಲ್ಲಿಸಿ.ಪಿ.ಯೋಗೀಶ್ವರ್‌ ಶ್ರಮವಿರಬಹುದು. ಅದಕ್ಕಾಗಿಯೇ ಅವರನ್ನೂ ಪರಿಗಣಿಸಿರಬಹುದು. ಪಕ್ಷದಲ್ಲಿ ಯಾವುದೇಬಂಡಾಯವಿಲ್ಲ.ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ’ ಎಂದು ಪ್ರಸಕ್ತ ಬೆಳವಣಿಗೆಗಳನ್ನು ಸಮರ್ಥಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.