ಯಲ್ಲಾಪುರ: ಹೃದಯ ಸಂಬಂಧಿಕಾಯಿಲೆಯಿಂದ ಬಳಲುತ್ತಿದ್ದ11 ವರ್ಷದ ಮಗಳನ್ನು ತಾಲ್ಲೂಕಿನ ಹೆಮ್ಮಾಡಿಯ ಕುಂಬ್ರಿಯಲ್ಲಿ ಬುಧವಾರ ತಂದೆಯೇ ಕೊಲೆ ಮಾಡಿ, ಪರಾರಿಯಾಗಿದ್ದಾನೆ.
ನಯನಾ ನಾಗರಾಜ ಪೂಜಾರಿ ಮೃತ ಬಾಲಕಿ. ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆಯನ್ನುತಂದೆ ನಾಗರಾಜ ಪೂಜಾರಿ ವಿಷ ನೀಡಿ ಕೊಲೆ ಮಾಡಿದ್ದಾಗಿ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೆಣ್ಣು ಮಕ್ಕಳಾಗಿದ್ದಕ್ಕೆ ಹತಾಶೆ:ಆರೋಪಿಗೆ ಮೂವರು ಹೆಣ್ಣು ಮಕ್ಕಳಿದ್ದು, ತನ್ನವಂಶಬೆಳೆಯುವುದಿಲ್ಲ ಎಂದು ಭಾವಿಸಿ ಹತಾಶನಾಗಿದ್ದ. ಅಲ್ಲದೇ ನಯನಾಳ ಹೃದಯ ಚಿಕಿತ್ಸೆಗೆ ಸಾಕಷ್ಟು ಹಣ ವ್ಯಯಿಸಿದ್ದ.ಸಾರಾಯಿ ಸೇವಿಸಿ, ಮನೆಗೆ ಬಂದು ದಿನವೂ ಪತ್ನಿ,ಮಕ್ಕಳೊಂದಿಗೆ ಗಲಾಟೆ ಮಾಡುತ್ತಿದ್ದ. ಇದರಿಂದ ಮನನೊಂದ ಪತ್ನಿಯು ಮಕ್ಕಳನ್ನು ಪತಿಯ ಮನೆಯಲ್ಲೇ ಬಿಟ್ಟು ಹೋಗಿದ್ದರು.
ಈ ಸಂಬಂಧಕಾರವಾರದ ಮಹಿಳಾ ಸಂಘದವರು ನಾಗರಾಜ ಪೂಜಾರಿ, ಪತ್ನಿ, ನಯನಾ ಹಾಗೂ ಆಕೆಯ ತಂಗಿ ಸಹನಾರನ್ನು ಕರೆಸಿ ಕೌನ್ಸೆಲಿಂಗ್ ಮಾಡಿದ್ದರು. ಆಗ ಬಾಲಕಿಯರು ತಮಗೆ ತಾಯಿ ಬೇಕು ಎಂದು ಹೇಳಿದ್ದರು. ಇದರಿಂದ ಸಿಟ್ಟಾದ ನಾಗರಾಜ, ಜ.5ರಂದು ಇಬ್ಬರ ಮೇಲೂ ಪೊರಕೆಯಿಂದ ಹಲ್ಲೆ ಮಾಡಿದ್ದ. ಅಲ್ಲದೇ ಜ.9ರಂದು ತನ್ನ ಮನೆಯಲ್ಲಿ ನಯನಾಳನ್ನು ವಿಷ ನೀಡಿ ಕೊಲೆ ಮಾಡಿದ್ದಾನೆ. ಸಂಬಂಧಿಕರು ಮನೆಗೆ ಬಂದಾಗ ವಿಚಾರ ಬೆಳಕಿಗೆ ಬಂತುಎಂದು ಪೊಲೀಸರು ತಿಳಿಸಿದ್ದಾರೆ
ಸಿ.ಪಿ.ಐ ಡಾ.ಮಂಜುನಾಥ ನಾಯಕ ಹಾಗೂ ಪಿ.ಎಸ್.ಐ ಚಂದ್ರಶೇಖರ ಹರಿಹರ ಸ್ಥಳಕ್ಕೆ ಭೇಟಿ ನೀಡಿದ್ದು, ಸಿವಿಲ್ ಹೆಡ್ ಕಾನ್ಸ್ಟೆಬಲ್ ಗಣೇಶ ಗುರುವ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.