ADVERTISEMENT

23ರಿಂದ ಅಭಿವೃದ್ಧಿ ಸಂವಾದ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 18:15 IST
Last Updated 5 ಫೆಬ್ರುವರಿ 2019, 18:15 IST

ಬೆಂಗಳೂರು: ಮೇಲುಕೋಟೆಯ ‘ಹೊಸ ಜೀವನ ದಾರಿ’ ಕೇಂದ್ರದಲ್ಲಿ ಫೆ. 23 ಮತ್ತು 24ರಂದು ‘ಅಭಿವೃದ್ಧಿ ಸಂವಾದ – 2019’ ಶಿಬಿರವನ್ನು ಆಯೋಜಿಸಲಾಗಿದೆ.

ಜನಪದ ಸೇವಾ ಟ್ರಸ್ಟ್‌ ಆಯೋಜಿಸಿರುವ ಈ ಶಿಬಿರದಲ್ಲಿ ‘ಅಭಿವೃದ್ಧಿಯ ರಾಜಕೀಯ ಪರಿಕಲ್ಪನೆ’ ಎಂಬ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಸಂವಾದಗಳು ನಡೆಯಲಿವೆ.

ಚಿಂತಕ, ಲಕ್ಷ್ಮೀಶ ತೋಳ್ಪಾಡಿ, ಅರ್ಥಶಾಸ್ತ್ರಜ್ಞ ಎಂ.ಎಸ್. ಶ್ರೀರಾಮ್‌, ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ಪ್ರಾಧ್ಯಾಪಕ ಸುಜಿತ್ ಸಿನ್ಹ ಮತ್ತು ಮಾಜಿ ಶಾಸಕ ಬಿ.ಆರ್. ಪಾಟೀಲ್‌ ಭಾಗವಹಿಸಿ ತಮ್ಮ ವಿಚಾರ ಮಂಡಿಸಲಿದ್ದಾರೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ. ನಾರಾಯಣ ಈ ಶಿಬಿರದ ನಿರ್ದೇಶಕರು. ಆಸಕ್ತರು ಈ ಶಿಬಿರದಲ್ಲಿ ಭಾಗವಹಿಸಬಹುದು.

ADVERTISEMENT

ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ: ಫೆ. 15. ಮೊದಲು ಬಂದ 25 ಜನರಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ: 8618770716/ 9945290163

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.