ADVERTISEMENT

‘ಪ್ರಜಾವಾಣಿ’ ಓದುಗರಿಂದ ಪಡಿತರ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 15:03 IST
Last Updated 16 ಏಪ್ರಿಲ್ 2020, 15:03 IST
‘ಪ್ರಜಾವಾಣಿ’ ಪತ್ರಿಕೆ ಓದುಗರಾದ ಎಸ್.ಆರ್.ಶ್ರೀಕಾಂತ್ ಬುಧವಾರ 30 ಬಡ ಕುಟುಂಬಗಳಿಗೆ ಆಹಾರ ದಿನಸಿ ಕಿಟ್‌ ವಿತರಿಸಿದರು
‘ಪ್ರಜಾವಾಣಿ’ ಪತ್ರಿಕೆ ಓದುಗರಾದ ಎಸ್.ಆರ್.ಶ್ರೀಕಾಂತ್ ಬುಧವಾರ 30 ಬಡ ಕುಟುಂಬಗಳಿಗೆ ಆಹಾರ ದಿನಸಿ ಕಿಟ್‌ ವಿತರಿಸಿದರು   

ಜಯಪುರ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ಬಡವರ ನೆರವಿಗೆ ‘ಪ್ರಜಾವಾಣಿ’ ಓದುಗರಾದ ಎಸ್.ಆರ್.ಶ್ರೀಕಾಂತ್ ಮುಂದಾಗಿದ್ದಾರೆ.

5 ಕೆ.ಜಿ. ಅಕ್ಕಿ, 2 ಕೆ.ಜಿ. ರಾಗಿಹಿಟ್ಟು, 1 ಕೆ.ಜಿ. ಬೇಳೆ, ಶಾವಿಗೆ, ಬಟ್ಟೆ ಸೋಪು, ಸಕ್ಕರೆ, ಕಡಲೆ ಬೇಳೆ, ಅಡುಗೆ ಎಣ್ಣೆ, ಟೂತ್‌ ಪೇಸ್ಟ್, ಪುಳಿಯೋಗರೆ ಪ್ಯಾಕೇಟ್, ಉಪ್ಪು ಇನ್ನಿತರೆ ದಿನಸಿ ಪದಾರ್ಥಗಳ ಆಹಾರ ಕಿಟ್ ಅನ್ನು ಗ್ರಾಮದ 30 ಬಡ ಕುಟುಂಬಗಳಿಗೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರಹರಿ ಬಡವರನ್ನು ಗುರುತಿಸುವಲ್ಲಿ ಸಹಕಾರ ನೀಡಿದ್ದಾರೆ.

ADVERTISEMENT

‘ಜಯಪುರ ಗ್ರಾಮದ ಅತಿ ಕಡು ಬಡ ಕುಟುಂಬಗಳಿಗೆ, ಪಡಿತರ ಚೀಟಿ ವಂಚಿತರಿಗೆ ಮತ್ತೆ 70 ಆಹಾರ ಕಿಟ್‌ಗಳನ್ನು ಶನಿವಾರ ವಿತರಿಸುವುದಾಗಿ’ ಎಸ್.ಆರ್.ಶ್ರೀಕಾಂತ್ ‘ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.